ಪೊನ್ನಂಪೇಟೆ:ವಿವಿಧ ರಸ್ತೆ ಕಾಮಗಾರಿಗಳಿಗೆ ಎ.ಎಸ್ ಪೊನ್ನಣ್ಣ ಗುದ್ದಲಿ ಪೂಜೆ
ಪೊನ್ನಂಪೇಟೆ:ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ನವರು, ಶುಕ್ರವಾರ ತಮ್ಮ ಕ್ಷೇತ್ರದ ಪೊನ್ನಂಪೇಟೆ ತಾಲೂಕಿನ ಬಲ್ಯಮಂಡೂರು ಗ್ರಾಮಕ್ಕೆ ಭೇಟಿ ನೀಡಿದರು. ಮೊದಲಿಗೆ ಮಾನ್ಯ ಶಾಸಕರು ಸ್ಥಳೀಯ ಬಸವೇಶ್ವರ ದೇವಸ್ಥಾನದ ಬಳಿ, ಈ ಭಾಗದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದರು. ಶಾಸಕರು ಕಾರ್ಯಕರ್ತರಗಳ ಅಹವಾಲುಗಳನ್ನು ಸ್ವೀಕರಿಸಿ ಅವರ ಸಮಸ್ಯೆಗಳನ್ನು ಆಲಿಸಿದರು.
ಬಳಿಕ ಶಾಸಕರ ಅನುದಾನದಲ್ಲಿ ಮತ್ತು ಸರಕಾರದ ಹಲವು ಕಾರ್ಯಕ್ರಮಗಳ ಅಡಿಯಲ್ಲಿ, ಈ ಭಾಗದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ, ಅಂದಾಜು ಮೊತ್ತ ₹ 20 ಲಕ್ಷಗಳ ವಿವಿಧ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು. ಭೂಮಿ ಪೂಜೆ ಸಂದರ್ಭದಲ್ಲಿ ಸ್ಥಳೀಯ ಗ್ರಾಮಸ್ಥರು ಹಾಗು ಪ್ರಮುಖರು ಉಪಸ್ಥಿತರಿದ್ದು, ಅವರುಗಳ ಕೋರಿಕೆಯಂತೆ, ಈ ಭಾಗದ ಇತರ ಕೆಲವು ರಸ್ತೆಗಳ ವಸ್ತು ಸ್ಥಿತಿಯನ್ನು ಅರಿಯಲು, ವೀಕ್ಷಣೆಯನ್ನು ಮಾನ್ಯ ಶಾಸಕರು ಮಾಡಿದರು. ಇದೇ ಸಂದರ್ಭದಲ್ಲಿ ಕೊಟ್ಟಂಗಡ ಐನ್ ಮನೆಯ ಅಭಿವೃದ್ಧಿಗೆ ತಮ್ಮ ಅನುದಾನದಲ್ಲಿ ನೀಡಿದ್ದ ₹ 3.5 ಲಕ್ಷದ ಕಾಮಗಾರಿಯನ್ನು ವೀಕ್ಷಿಸಲು ಐನ್ ಮನೆಯ ಪ್ರಮುಖರ ಇಚ್ಛೆಯಂತೆ ತೆರಳಿದರು. ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮೀದೇರಿರ ನವೀನ್, ಬಲ್ಯಮಂಡೂರು ವಲಯ ಅಧ್ಯಕ್ಷರಾದ ಕೊಟ್ಟಂಗಡ ರಾಜ ಕಾರ್ಯಪ್ಪ,ಕಾಂಗ್ರೆಸ್ ಹಿರಿಯ ಮುಖಂಡರಾದ ಪೊನ್ನಪ್ಪ, ಹಾಗೂ ಪಕ್ಷದ ಇತರ ಪ್ರಮುಖರು ಉಪಸಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
