ಕಲೆಯ ನಡಿಗೆ ಜನರ ಬಳಿಗೆ ಅದ್ಭುತ ಕಲ್ಪನೆ: ತೆನ್ನಿರ ಮೈನಾ ಮೆಚ್ಚುಗೆ

Jun 6, 2026 - 19:46
 0  224
ಕಲೆಯ ನಡಿಗೆ ಜನರ ಬಳಿಗೆ ಅದ್ಭುತ ಕಲ್ಪನೆ: ತೆನ್ನಿರ ಮೈನಾ ಮೆಚ್ಚುಗೆ

ಮಡಿಕೇರಿ; ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲೆಯ ನಡಿಗೆ ಜನರ ಬಳಿಗೆ ಎಂಬ ವಿನೂತನ ಕಾರ್ಯಕ್ರಮವನ್ನು ಪರಿಚಯಿಸುತ್ತಿರುವುದು ಅದ್ಭುತ ಕಲ್ಪನೆ ಎಂದು ತೆನ್ನಿರ ಮೈನಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನವೀನ ಕಾರ್ಯಕ್ರಮದ ಆರಂಭಿಕ ಕಾರ್ಯಕ್ರಮವನ್ನು ಮಡಿಕೇರಿ ನಗರದ ರಿಲೆಯನ್ಸ್ ಮಾಲ್ ನಲ್ಲಿ ಏರ್ಪಡಿಸಿದ್ದು ಕಾರ್ಯಕ್ರಮದಲ್ಲಿ ಸ್ಯಾಕ್ಸೋ ಪೋನ್ ವಾದ್ಯವನ್ನು ಅಸ್ವಾದಿಸಿ ಮಾತನಾಡಿದ ತೆನ್ನಿರ ಮೈನಾ ಇಂತಹ ಕಾರ್ಯಕ್ರಮಗಳಿಗೆ ಪ್ರಚಾರ ಪಡಿಸಿದರೆ ಕಲಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಆನಂದಿಸುತ್ತಾರೆ ಎಂದು ಹೇಳಿದರು.

ಮೊದಲು ರಾಜಾಶ್ರಯ ,ನಂತರ ಕಲಾ ಮಂದಿರ,ದೈವಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಾತ್ರ ವೀಕ್ಷಿಸಲು ಮತ್ತು ಆಲಿಸಲು ಸಾಧ್ಯವಾಗಿದ್ದ ಕಲಾ ಕಾರ್ಯಕ್ರಮಗಳನ್ನು ಸಾರ್ವಜನಿಕವಾಗಿ ಎಲ್ಲರಿಗೂ ಅನುಭವಿಸಲು ಅವಕಾಶ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗೆ ಅಭಿನಂದನೆಗಳನ್ನು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ್ ರವರು ಪ್ರತಿ ತಿಂಗಳ ಮೊದಲನೆ ಶನಿವಾರ ಜಿಲ್ಲೆಯ ಜನನಿಬಿಡ ಪ್ರದೇಶಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡದರು. ಹೊದ್ದೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಹೆಚ್.ಎ.ಹಂಸ, ಯುವಕ ಸಂಘದ ಪದಾಧಿಕಾರಿ ಸೇರಿದಂತೆ ಮಾಲ್ ಗೆ ಬಂದ ಗ್ರಾಹಕರು ಸಂಗೀತವನ್ನು ಆಲಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0