ವೈದ್ಯರಾದ ಸೂಯ೯ಕುಮಾರ್, ರವಿ ಅಪ್ಪಾಜಿ ಅವರಿಗೆ ಐಎಂ.ಎ ವತಿಯಿಂದ ಸನ್ಮಾನ
admincoorgdaily
ಮಡಿಕೇರಿ:ಸಾಹಿತ್ಯ ಕೖತಿಗಾಗಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಕೆ.ಬಿ.ಸೂಯ೯ಕುಮಾರ್ ಮತ್ತು ವೖತ್ತಿ ಜೀವನದ ಸಾಧನೆಗಾಗಿ ಪ್ರಶಸ್ತಿಗೆ ಭಾಜನರಾದ ಡಾ. ರವಿ ಅಪ್ಪಾಜಿ ಅವರನ್ನು ಭಾರತೀಯ ಮೆಡಿಕಲ್ ಅಸೋಸಿಯೇಷನ್ ನ ಕೊಡಗು ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು
. ಮಂಗಳಮುಖಿಯ ಜೀವನಗಾಥೆಯಾದ ಮಂಗಳಿ ಕೖತಿಗಾಗಿ ರಾಜ್ಯ ವೈದ್ಯ ಬರಹಗಾರರ ಸಂಘದಿಂದ ಪ್ರಶಸ್ತಿ ಪಡೆದ ಮಡಿಕೇರಿಯ ಡಾ.ಕೆ.ಬಿ.ಸೂಯ೯ಕುಮಾರ್ ಮತ್ತು ರಾಜ್ಯಮಟ್ಟದ ಹೆಲ್ತ್ ಕೇರ್ ಪ್ರಶಸ್ತಿ ಪಡೆದ ಮಡಿಕೇರಿಯ ಡಾ. ರವಿ ಅಪ್ಪಾಜಿ ಅವರನ್ನು ಭಾರತೀಯ ಮೆಡಿಕಲ್ ಅಸೋಸಿಯೇಷನ್ ನ ಕೊಡಗು ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಶ್ರೀಯುತರ ಸಾಧನೆ ಮತ್ತಷ್ಟು ಹೆಚ್ಚಲಿ ಎಂದು ಹಾರೈಸಲಾಯಿತು.
ಭಾರತೀಯ ಮೆಡಿಕಲ್ ಅಸೋಸಿಯೇಷನ್ ನ ಕೊಡಗು ಘಟಕದ ಅಧ್ಯಕ್ಷ ಡಾ.ಶಾಮ್ ಅಪ್ಪಣ್ಣ, ಡಾ.ಪಾತಿಮ, ಡಾ. ಕೆ.ಬಿ.ಮುತ್ತಪ್ಪ ಮತ್ತು ಸಂಘದ ಜಿಲ್ಲಾ ಪ್ರಧಾನ ಕಾಯ೯ದಶಿ೯ ಡಾ. ಸಿ.ಆರ್. ಪ್ರಶಾಂತ್ ಅವರು ಸಾಧಕ ವೈದ್ಯರನ್ನು ಗೌರವಿಸಿದರು. ಕಾಯ೯ಕ್ರಮದಲ್ಲಿ ಮೈಸೂರಿನ ನಾರಾಯಣ ಹೖದಯಾಲಯದ ತಜ್ಞ ವೈದ್ಯರಾದ ಡಾ.ಲೇಪಾಕ್ಷಿ, ಡಾ. ವಿದ್ಯಾ, ಡಾ. ನಿಶ್ಚಲ್ ರಾಜ್ ಅವರು ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆಯ ಇತ್ತೀಚಿನ ವಿದ್ಯಮಾನಗಳ ಬಗ್ಗೆ ವೈದ್ಯರಿಗೆ ಮಾಹಿತಿ ನೀಡಿದರು.