ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿಗೆ ಡಾ.ಸಿ.ಸೋಮಶೇಖರ್ ಸಮರ್ಥರು: ವ್ಯಕ್ತಿ ಪರಿಚಯ ಬಿಡುಗಡೆಯಲ್ಲಿ ನಬಿ ಕುಷ್ಟಗಿ ಆಶಯ

Dec 17, 2025 - 12:33
 0  223
ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿಗೆ  ಡಾ.ಸಿ.ಸೋಮಶೇಖರ್ ಸಮರ್ಥರು: ವ್ಯಕ್ತಿ ಪರಿಚಯ  ಬಿಡುಗಡೆಯಲ್ಲಿ  ನಬಿ ಕುಷ್ಟಗಿ ಆಶಯ

ಕುಶಾಲನಗರ : ಮುಂಬರುವ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನಕ್ಕೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿವೃತ್ತ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅವರ ಆಯ್ಕೆ ಯಾಗಬೇಕಿದೆ ಎಂದು ಪರಿಷತ್ತಿನ ರಾಜ್ಯ ಪ್ರತಿನಿಧಿ ನಭಿ ಕುಷ್ಟಗಿ ಹೇಳಿದರು.

ಸಾಹಿತ್ಯಾಸಕ್ತರ ವೇದಿಕೆಯ ವತಿಯಿಂದ ಜಿಲ್ಲಾದ್ಯಂತ ನಡೆಸುತ್ತಿರುವ ಕಸಾಪಕ್ಕೆ ಡಾ.ಸಿ.ಸೋಮಶೇಖರ್ ಸೂಕ್ತ ಎಂಬ ಆಂದೋಲನದಲ್ಲಿ ಡಾ.ಸಿ.ಸೋಮಶೇಖರ್ ಅವರ ವ್ಯಕ್ತಿ ಪರಿಚಯದ ಭಿತ್ತಿ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಾಹಿತ್ಯಾಸಕ್ತರಿಂದ ಡಾ.ಸಿ.ಸೋಮಶೇಖರ್ ಅವರ ಪರವಾದ ಜನಾಭಿಪ್ರಾಯ ಬಹಳ ಉತ್ತಮವಾಗಿ ರೂಪುಗೊಳ್ಳುತ್ತಿದೆ. ಆದ್ದರಿಂದ ಕೊಡಗು ಜಿಲ್ಲೆಯ ಸಾಹಿತ್ಯಾಭಿಮಾನಿಗಳು ಕಸಾಪ ಸದಸ್ಯರು ತಮ್ಮ ಮುಂದಿನ ಆಯ್ಕೆಯಾಗಿ ಡಾ.ಸಿ.ಸೋಮಶೇಖರ್ ಅವರನ್ನು ಬೆಂಬಲಿಸಬೇಕಾದ ಅನಿವಾರ್ಯತೆ ಬಗ್ಗೆ ಮಾತನಾಡಿದರು.

 ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕರಾದ ರಾಮಚಂದ್ರರಾಜೇ ಅರಸು ಈ ಸಂದರ್ಭ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಅವರ ವ್ಯಕ್ತಿ ಪರಿಚಯದ ಹೊತ್ತಿಗೆಯನ್ನು ಬಿಡುಗಡೆಗೊಳಿಸಿದರು.

 ಈ ಸಂದರ್ಭ ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ತಾಲ್ಲೂಕು ಅಧ್ಯಕ್ಷ ಬಸವರಾಜು, ಎಸ್ಸಿ ಎಸ್ಟಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹೇಂದ್ರ ಕುಮಾರ್, ಕಸಾಪ ತಾಲ್ಲೂಕು ಕಾರ್ಯದರ್ಶಿ ಗಳಾದ ನಾಗರಾಜು, ಶೈಲಾ ಪ್ರೇಮಕುಮಾರ್, ಜಿಲ್ಲಾ ಸಮಿತಿ ನಿರ್ದೇಶಕ ಟಿ.ಜಿ.ಪ್ರೇಮಕುಮಾರ್, ಕೊಡಗು ಸಾಹಿತ್ಯಾಸಕ್ತರ ವೇದಿಕೆ ಅಧ್ಯಕ್ಷ ಕೆ.ಎಸ್. ಮೂರ್ತಿ, ರಘು ಹೆಬ್ಬಾಲೆ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0