ವಿದ್ಯಾಭಾರತಿ ಬಡಾವಣೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
admincoorgdaily

ಮಡಿಕೇರಿ:ಕರ್ಣಂಗೇರಿ ಗ್ರಾಮದ ಸ್ಪೂರ್ತಿ ಯುವಕ ಸಂಘದ ವತಿಯಿಂದ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು ಸ್ಪೂರ್ತಿ ಯುವಕ ಸಂಘದ ಅಧ್ಯಕ್ಷರಾದ ಧನು ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.ಧ್ವಜಾರೋಹಣವನ್ನು ಗ್ರಾಮ ಪಂಚಾಯತಿ ನಿಕಟಪೂರ್ವ ಸದಸ್ಯರಾದ ಜಾನ್ಸನ್ ಪಿಂಟೋ ರವರು ನೆರವೇರಿಸಿ ದಿನದ ವಿಚಾರದ ಬಗ್ಗೆ ಮಾತನಾಡಿದರು. ಗ್ರಾಮದ ಯುವಕರು ಹಿರಿಯ ಮತ್ತು ಮಕ್ಕಳು ಹಾಗೂ ಯುವಕ ಸಂಘದ ಸದಸ್ಯರು ಹಾಜರಿದ್ದರು.