ಕುಶಾಲನಗರ: ವೈದ್ಯರ ಕರ್ತವ್ಯಕ್ಕೆ ಅಡ್ಡಿ ಹಾಗೂ 10ಲಕ್ಷ ರೂ ಬೇಡಿಕೆ ಆರೋಪ; ಆರೋಪಿಯ ಬಂಧನ

Nov 24, 2025 - 23:17
Nov 24, 2025 - 23:29
 0  1.4k
ಕುಶಾಲನಗರ: ವೈದ್ಯರ ಕರ್ತವ್ಯಕ್ಕೆ ಅಡ್ಡಿ ಹಾಗೂ 10ಲಕ್ಷ ರೂ ಬೇಡಿಕೆ ಆರೋಪ; ಆರೋಪಿಯ ಬಂಧನ

ಮಡಿಕೇರಿ: ಕುಶಾಲನಗರ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ವೈದ್ಯರ ಕರ್ತವ್ಯಕ್ಕೆ ಅಡ್ಡಿ ಮತ್ತು ಬೆದರಿಕೆ ಹಾಗೂ 10 ಲಕ್ಷ ರೂಗಳ ಬೇಡಿಕೆ ಇಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ಪ್ರಖ್ಯಾತ ಗೌಡ ಎಂಬಾತನನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.

ಆಸ್ಪತ್ರೆಯ ವೈದ್ಯರಾದ ಡಾ ಚೇತನ್ ಅವರಿಗೆ ಪ್ರಖ್ಯಾತ ಗೌಡ ಮತ್ತು ಇತರರು ಆಸ್ಪತ್ರೆಗೆ ತೆರಳಿ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದು ಅಲ್ಲದೆ ಅವರಿಂದ 10 ಲಕ್ಷ ರೂಗಳ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಇತ್ತೀಚೆಗೆ ಕೊಡಗು ಜಿಲ್ಲೆಯ ಸರಕಾರಿ ವೈದ್ಯರು ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಕುಶಾಲನಗರ ಪೊಲೀಸರು ಪ್ರಖ್ಯಾತ ಗೌಡನನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.

What's Your Reaction?

Like Like 3
Dislike Dislike 1
Love Love 3
Funny Funny 0
Angry Angry 0
Sad Sad 2
Wow Wow 0