ಕುಶಾಲನಗರ; ನದಿಯಲ್ಲಿ ‌ಮುಳುಗಿ ನಾಗಾಲ್ಯಾಂಡ್ ಮೂಲದ ‌ಇಬ್ಬರು ಯುವಕರು ಸಾವು

Jun 10, 2026 - 19:44
 0  1.7k
ಕುಶಾಲನಗರ; ನದಿಯಲ್ಲಿ ‌ಮುಳುಗಿ  ನಾಗಾಲ್ಯಾಂಡ್ ಮೂಲದ ‌ಇಬ್ಬರು ಯುವಕರು ಸಾವು

ಕುಶಾಲನಗರ, ಜೂ 10: ಕಾವೇರಿ ನದಿಯಲ್ಲಿ ಮುಳುಗಿ ನಾಗಾಲಾಂಡ್ ಮೂಲದ ಇಬ್ಬರು ಯುವಕರು ಮೃತಪಟ್ಟ ಘಟನೆ ಕುಶಾಲನಗರ ರಸೂಲ್ ಲೇಔಟ್ ಬಳಿ ಬುಧವಾರ ಸಂಜೆ ನಡೆದಿದೆ.

ನಾಗಾಲಾಂಡ್ ರಾಜ್ಯದ ಬಸೋಸೊ ಕುಂ ಚಂಗ್ (23) ಹಾಗೂ ಯಾಂಕಾಂಗ್ (27) ಮೃತ ಯುವಕರು. ಕುಶಾಲನಗರದ ಹೋಟೆಲ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಈ ಇಬ್ಬರು ಯುವಕರು ಹಾಗೂ ಓರ್ವ ಯುವತಿ ಕೆಲಸಕ್ಕೆ ರಜೆ ಮಾಡಿ ಸಂಜೆ ನದಿಯತ್ತ ತೆರಳಿದ್ದಾರೆ.

ನದಿ ದಡದಲ್ಲಿ ಪಾರ್ಟಿ ಮಾಡಿದ ಬಳಿಕ ಇಬ್ಬರು ಯುವಕರು ನದಿಗಿಳಿದಿದ್ದಾರೆ. ಈ ಸಂದರ್ಭ ಆಳವಾದ ಗುಂಡಿಯಲ್ಲಿ ಮುಳುಗಿ ಯುವಕರು ಮೃತಪಟ್ಟಿದ್ದಾರೆ. ಕುಶಾಲನಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕತ್ತಲೆಯಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗದ ಹಿನ್ನೆಲೆಯಲ್ಲಿ ಮೃತ ದೇಹಗಳು ಪತ್ತೆಯಾಗಿಲ್ಲ.

What's Your Reaction?

Like Like 0
Dislike Dislike 0
Love Love 2
Funny Funny 0
Angry Angry 0
Sad Sad 8
Wow Wow 0