ಕೊಡವಕೇರಿ ನಿವಾಸಿಗಳ 22ನೇ ವರ್ಷದ ಮಹಾಸಭೆಯಲ್ಲಿ ಶಾಸಕ ಎಎಸ್ ಪೊನ್ನಣ್ಣ ಅವರಿಗೆ ಸನ್ಮಾನ
ವಿರಾಜಪೇಟೆ: ತಾಲೂಕು ಪಂಜರಪೇಟೆ ಭಾಗದ ಕೊಡವಕೇರಿ ನಿವಾಸಿಗಳು ಆಯೋಜಿಸಿದ 22ನೇ ವರ್ಷದ ಮಹಾ ಸಭೆಯಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡ ಮಾನ್ಯ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರಿಗೆ ಕೊಡವಕೇರಿಯ ಸರ್ವ ಸದಸ್ಯರು ಸನ್ಮಾನ ಮಾಡಲಾಯಿತು. ಈ ಸಭೆಯಲ್ಲಿ ಪಂಜರಪೇಟೆ ಕೊಡವಕೇರಿಯ ಅಧ್ಯಕ್ಷರು ವಾಂಚೀರ ವಿಠಲ ನಾಣಯ್ಯ, ಕೊಡವಕೇರಿಯ ಎಲ್ಲಾ ಸದಸ್ಯರುಗಳು, ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
