ಜುಲೈ 25 ಮತ್ತು 26ರಂದು ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ

Jul 23, 2026 - 21:35
 0  12
ಜುಲೈ 25 ಮತ್ತು 26ರಂದು ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ

ಕುಶಾಲನಗರ, ಜು.23: ಕುಶಾಲನಗರ ಅರಣ್ಯ ವಲಯದ ಆನೆಕಾಡು ಶಾಖೆಯ ಹೊರೂರು, ಮೋದೂರು , ಅತ್ತೂರು ನಲ್ಲೂರು ಗ್ರಾಮದ ಕೊರ್ತಿಕಾಡು, ಕಾರೆಕೊಲ್ಲಿ ಗ್ರೀನ್ ಲ್ಯಾoಡ್, ಮತ್ತಿಕಾಡು, ಭೂತನಕಾಡು, ಟಾಟಾ ಕಾಫಿ ಮತ್ತು ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಅಂದಾಜು 15 ಕಾಡಾನೆಗಳನ್ನು ಆನೆಕಾಡು ಸಂರಕ್ಷಿತ ಅರಣ್ಯಕ್ಕೆ ಹಿಮ್ಮೆಟ್ಟಿಸುವ ಕಾರ್ಯಾಚರಣೆಯನ್ನು ಶನಿವಾರ ಮತ್ತು ಭಾನುವಾರ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಯಲ್ಲಿ ವಲಯ ಹಾಗೂ ಉಪವಲಯ ಅರಣ್ಯಾಧಿಕಾರಿಗಳು ಸೇರಿದಂತೆ ಆರ್ ಆರ್ ಟಿ ಪಡೆಯನ್ನೊಳಗೊಂಡಂತೆ 20 ಸಿಬ್ಬಂದಿಗಳು ಭಾಗವಹಿಸಲಿದ್ದಾರೆ. ಈ ಹಿನ್ನಲ್ಲೆಯಲ್ಲಿ ಈ ಭಾಗದ ರೈತರು, ಕಾರ್ಮಿಕರು, ಶಾಲೆಗೆ ತೆರಳುವ ಮಕ್ಕಳು, ಹಿರಿಯ ನಾಗರೀಕರು, ವಾಹನ ಸವಾರರು ಎಚ್ಚರಿಕೆಯಿಂದ ಇರುವಂತೆ ಹಾಗೂ ಕಾರ್ಯಾಚರಣೆ ದಿನ ತೋಟದಲ್ಲಿ ಕೆಲಸ ಮಾಡದಂತೆ ಹಾಗೂ ಕಾರ್ಯಾಚರಣೆಗೆ ಅರಣ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ಕುಶಾಲನಗರ ವಲಯ ಅರಣ್ಯಾಧಿಕಾರಿ ಆರ್. ರಕ್ಷಿತ್ ಪ್ರಕಟಣೆಯಲ್ಲಿ ಕೋರಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0