ಎಸ್.ಐ.ಆರ್ ಪ್ರಕ್ರಿಯೆ; ತಾಲ್ಲೂಕುವಾರು ಕಾಂಗ್ರೆಸ್ ವಾರ್ ರೂಮ್ ರಚನೆ

Jul 7, 2026 - 12:14
 0  176
ಎಸ್.ಐ.ಆರ್ ಪ್ರಕ್ರಿಯೆ; ತಾಲ್ಲೂಕುವಾರು ಕಾಂಗ್ರೆಸ್ ವಾರ್ ರೂಮ್ ರಚನೆ

ಮಡಿಕೇರಿ: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ( ಎಸ್.ಐ.ಆರ್) ಪ್ರಕೃಯೆಯನ್ನು ಪೂರ್ಣ ಪ್ರಮಾಣದಲ್ಲಿ ಯಶಸ್ವಿ ಗೊಳಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಆರು ಬ್ಲಾಕ್ ಗಳಲ್ಲಿ ( ತಾಲ್ಲೂಕುವಾರು) ವಾರ್ ರೂಂ ರಚಿಸಿ ವಾರ್ ಸಂಚಾಲಕರನ್ನು‌ ನೇಮಕಾತಿ ಮಾಡಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ನವರು ಆದೇಶ ಹೊರಡಿಸಿದ್ದಾರೆ.

ಮಡಿಕೇರಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎ.ಹಂಸ ನೇತೃತ್ವದಲ್ಲಿ ವಾರ್ ರೂಂ ಸಂಚಾಲಕ ಕೋಚನ ಚೇತನ್, ಸೋಮವಾರಪೇಟೆ ತಾಲ್ಲೂಕಿನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಬಿ.ಸತೀಶ್ ನೇತೃತ್ವದಲ್ಲಿ ವಾರ್ ರೂಮ್ ಸಂಚಾಲಕ ಸುನೀಲ್,ಕುಶಾಲನಗರ! ತಾಲ್ಲೂಕಿನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಪಿ.ಶಶಿಧರ್ ನೇತೃತ್ವದಲ್ಲಿ ವಾರ್ ರೂಮ್ ಸಂಚಾಲಕ ಚಂದನ್ ಕುಮಾರ್ , ವಿರಾಜಪೇಟೆ ತಾಲ್ಲೂಕಿನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ ನೇತೃತ್ವದಲ್ಲಿ ವಾರ್ ರೂಮ್ ಸಂಚಾಲಕ ಪಿ.ವಿ.ಜಾನ್ಸನ್, ಪೊನ್ನಂಪೇಟೆ ತಾಲ್ಲೂಕಿನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೀದೇರಿರ ನವೀನ್ ನೇತೃತ್ವದಲ್ಲಿ ವಾರ್ ರೂಮ್ ಸಂಚಾಲಕ ಪ್ರದೀಪ್ ,ನಾಪೊಕ್ಲು ಬ್ಲಾಕ್ ವ್ಯಾಪ್ತಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಶೌಕತ್ ಆಲಿ ನೇತೃತ್ವದಲ್ಲಿ ವಾರ್ ರೂಮ್ ಸಂಚಾಲಕ ಕೆ.ಎಂ.ಬಷೀರ್ ರವರನ್ನು ಒಳಗೊಂಡ ತರಬೇತಿ ಹೊಂದಿದ ತಜ್ಞರ ತಂಡ 24/7 ಆಯಾ ಭಾಗದಲ್ಲಿ ಕರ್ತವ್ಯ ನಿರ್ವಹಿಸಲಿದ್ದು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ವಾರ್ ರೂಂ ಅಧ್ಯಕ್ಷರಾದ ತೆನ್ನಿರ ಮೈನಾ ಮೈನಾ ರವರು ನಿರ್ವಹಣೆ ಮಾಡಲಿದ್ದು ಕೆ.ಪಿ.ಸಿ.ಸಿ ಸದಸ್ಯರಾದ ಬೇಕಲ್ ರಮಾನಾಥ್ ರವರು ಮಾರ್ಗದರ್ಶನ ನೀಡುವ ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂದು ಧರ್ಮಜ ಉತ್ತಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತದಾರರಿಗೆ ಹೆಚ್ಚಿನ‌ ಮಾಹಿತಿಗೆ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ. ಧರ್ಮಜ ಉತ್ತಪ್ಪ 9448448592 ತೆನ್ನಿರ ಮೈನಾ 9449156215 ಬೇಕಲ್ ರಮಾನಾಥ್ 9449915539 ಹೆಚ್.ಎ.ಹಂಸ 9632834858 ವಿ.ಪಿ.ಶಶಿಧರ್ 9448073030 ಬಿ.ಬಿ.ಸತೀಶ್ 9611941737 ಪಟ್ಟಡ ರಂಜಿ ಪೂಣಚ್ಚ 9902431228 ಮೀದೇರಿರ ನವೀನ್ 9448647848 ಶೌಕತ್ ಆಲಿ 9632834913 ಕೋಚನ ಚೇತನ್ 9740648631 ಚಂದನ್ ಕುಮಾರ್ 9844090903 ಸುನೀಲ್ 9900275510 ಪಿ.ವಿ.ಜಾನ್ಸನ್ 9980060342 ಪ್ರದೀಪ್ 9900927095 ಬಷೀರ್ ಕೆ.ಎಂ. 8073976618

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0