ವಿರಾಜಪೇಟೆ: ಕೆ.ಬೋಯಿಕೇರಿ ಬಳಿ ಟಿಪ್ಪರ್ ಡಿಕ್ಕಿ, ಪಾದಚಾರಿ ಸಾವು

Jun 30, 2026 - 19:37
Jun 30, 2026 - 20:01
 0  1.6k
ವಿರಾಜಪೇಟೆ: ಕೆ.ಬೋಯಿಕೇರಿ ಬಳಿ ಟಿಪ್ಪರ್ ಡಿಕ್ಕಿ, ಪಾದಚಾರಿ ಸಾವು

ವಿರಾಜಪೇಟೆ, ಜೂನ್ 29: ವಿರಾಜಪೇಟೆ ತಾಲ್ಲೂಕಿನ ಕೆ. ಬೋಯಿಕೇರಿ ಬಳಿ ಇಂದು ಸಂಜೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ಕೆ. ಬೋಯಿಕೇರಿ ನಿವಾಸಿ ದಿ. ರಂಗಯ್ಯ ಅವರ ಪುತ್ರ ವಿಜಯ -ವಿಜಿ -50 ಎಂದು ಗುರುತಿಸಲಾಗಿದೆ. ಅಪಘಾತದ ಬಳಿಕ ಚಾಲಕ ಟಿಪ್ಪರ್ ಸಮೇತ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

 ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣಾಧಿಕಾರಿ ಪ್ರಮೋದ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 2
Wow Wow 1