ಅರಣ್ಯ ಇಲಾಖೆಯ ತಪಾಸಣಾ ಕೊಠಡಿ ಮೇಲೆ ಕಾಡಾನೆ ದಾಳಿ: ಸಿಬ್ಬಂದಿಗಳು ಬಾಗಿಲು ಮುಚ್ಚಿ ಪ್ರಾಣ ಉಳಿಸಿಕೊಂಡರು

Jul 9, 2026 - 12:36
 0  816
ಅರಣ್ಯ ಇಲಾಖೆಯ ತಪಾಸಣಾ ಕೊಠಡಿ ಮೇಲೆ ಕಾಡಾನೆ ದಾಳಿ:  ಸಿಬ್ಬಂದಿಗಳು ಬಾಗಿಲು ಮುಚ್ಚಿ ಪ್ರಾಣ ಉಳಿಸಿಕೊಂಡರು

ಗೋಣಿಕೊಪ್ಪ: ಕೊಡಗಿನ ಗಡಿ ಭಾಗವಾದ ಆನೆ ಚೌಕೂರು ಗೇಟ್ ನಲ್ಲಿರುವ ಅರಣ್ಯ ಇಲಾಖೆಯ ತಪಾಸಣಾ ಕೊಠಡಿಗೆ ಕಾಡಾನೆ ದಾಳಿ ಮಾಡಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

 ಈ ಸಂದರ್ಭದಲ್ಲಿ ಕರ್ತವ್ಯ ನಿರತದಲ್ಲಿದ್ದ ಸಿಬ್ಬಂದಿಗಳು ಕೊಠಡಿಯ ಮುಂಭಾಗದ ಬಾಗಿಲು ಮುಚ್ಚಿ ಒಳಗೆ ಸೇರಿಕೊಂಡು ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾರೆ. ತನ್ನ ಸಿಟ್ಟು ತೀರಿಸಿಕೊಂಡ ನಂತರ ಕಾಡಾನೆ ಅಲ್ಲಿಂದ ಮರೆಯಾಗಿದೆ. ಘಟನೆಯಿಂದ ಕೊಠಡಿಗೆ ಹಾನಿಯಾಗಿದೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 0