Kodagu

ಭೂತನಕಾಡುವಿನಲ್ಲಿ ಬೈಕ್ ಮತ್ತು ಕಾರು ನಡುವೆ ಭೀಕರ ಅಪಘಾತ :ಸವಾರ ಮೃತ್ಯು

admincoorgdaily

ಭೂತನಕಾಡುವಿನಲ್ಲಿ ಬೈಕ್ ಮತ್ತು ಕಾರು ನಡುವೆ ಭೀಕರ ಅಪಘಾತ :ಸವಾರ ಮೃತ್ಯು

ಚೆಟ್ಟಳ್ಳಿ;ಬೈಕ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಮರಣವನ್ನಪ್ಪಿರುವ ಘಟನೆ ಗುರುವಾರ ಮಧ್ಯಾಹ್ನ ಚೆಟ್ಟಳ್ಳಿ ರಸ್ತೆಯ ಭೂತನಕಾಡು ಎಂಬಲ್ಲಿ ನಡೆದಿದೆ.

 ಸುಂಟಿಕೊಪ್ಪ ಸಮೀಪದ ಕಾನ್ ಬೈಲ್ - ಬೈಚನಹಳ್ಳಿ ಗ್ರಾಮದ ಪಡ್ಡಂಬೈಲು ಧನಂಜಯ ಎಂಬುವವರೇ ಮೃತ ದುರ್ದೈವಿ.

ಅಪಘಾತದಿಂದ ಗಂಭೀರವಾಗಿ ಗಾಯಗೊಂಡು ಚಿಂತಾಜನಕಾರಾಗಿದ್ದ ಧನಂಜಯ ಅವರನ್ನು ಮಡಿಕೇರಿ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭ ರಾತ್ರಿ ಮಾರ್ಗಮಧ್ಯದ ಸುಳ್ಯ ಬಳಿ ಕೊನೆಯುಸಿರು ಎಳೆದಿದ್ದಾರೆ.

 ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ ಸ್ವಗ್ರಾಮದಲ್ಲಿ ನೆರವೇರಲಿದೆ.