ಮಡಿಕೇರಿ ನಗರದ ತ್ಯಾಜ್ಯ ಸಮಸ್ಯೆ:ಬೆಂಗಳೂರಿನಲ್ಲಿ ಮಹತ್ವದ ಸಭೆ
admincoorgdaily

ಬೆಂಗಳೂರು;ವಿಕಾಸ ಸೌದ ದಲ್ಲಿ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮತ್ತು ನಗರ ಅಭಿವೃದ್ಧಿ ಕಾರ್ಯ ದರ್ಶಿ ಬಿ.ಬಿ. ಕಾವೇರಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ಜರುಗಿತು.
ಈ ಸಭೆ ಯಲ್ಲಿ ಮಡಿಕೇರಿ ನಗರದ ಕಸದ ಸಮಸ್ಯೆ, ತ್ಯಾಜ್ಯ ವಿಲೇವಾರಿ ಸಮಸ್ಯೆ ಹಾಗೂ ಯು ಜಿ ಡಿ ಮತ್ತು ಅಮೃತ್ - 2 ಕುಡಿಯುವ ನೀರಿನ ಕಾಮಗಾರಿ ಯ ಬಗ್ಗೆ ಚರ್ಚಿಸಿ ಆದಷ್ಟು ಬೇಗ ಎಲ್ಲಾ ಕಾಮಗಾರಿ ಮತ್ತು ಯೋಜನೆಯನ್ನು ಪೂರ್ತಿ ಗೊಳಿಸುವಂತೆ ನಿರ್ಧಾರ ಕೈಗೊಳ್ಳಲಾಯಿತು.
ಈ ಮಹತ್ವದ ಸಭೆ ಯಲ್ಲಿ ಮಡಿಕೇರಿ ನಗರಸಭಾ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ನಗರಸಭಾ ಸದಸ್ಯರು, ಪೌರಾಯುಕ್ತ ಕೆ. ಎಸ್. ರಮೇಶ್, ಮತ್ತು ಸಹಾಯಕ ಕಾರ್ಯ ಪಾಲಕ ಅಭಿಯಂತರರು ಹಾಜರಿದ್ದರು.