ಮಡಿಕೇರಿ:ಪತ್ನಿಗೆ ವೀಡಿಯೋ ‌ಕಾಲ್ ಮಾಡಿ,ಲೈವ್ ಆತ್ಮಹತ್ಯೆ ಮಾಡಿಕೊಂಡ ಯುವಕ

Nov 16, 2025 - 12:53
Nov 16, 2025 - 12:57
 0  3.9k
ಮಡಿಕೇರಿ:ಪತ್ನಿಗೆ ವೀಡಿಯೋ ‌ಕಾಲ್ ಮಾಡಿ,ಲೈವ್ ಆತ್ಮಹತ್ಯೆ ಮಾಡಿಕೊಂಡ ಯುವಕ
ಕಾಫಿ ‌ತೋಟ

ಸುಂಟಿಕೊಪ್ಪ: ಕಾಳು ಮೆಣಸು ಕಳವು ಪ್ರಕರಣದಲ್ಲಿ ಕೆಲ ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ತಾಲ್ಲೂಕಿನ ಬೋಯಿಕೇರಿ ಸಮೀಪ ಶನಿವಾರ ನಡೆದಿದೆ.ಕಿಬ್ಬೆಟ್ಟ ಗ್ರಾಮದ ಕೀರ್ತಿ (36) ಮೃತ ಯುವಕ.

ಕೀರ್ತಿ ಯಡವಾರೆಯ ಕಾಫಿ ತೋಟದಲ್ಲಿ ಕಾಳು ಮೆಣಸು ಕದ್ದ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ. ಸುಮಾರು 15 ದಿನಗಳ ಹಿಂದೆ ಜಾಮೀನು ಪಡೆದು ಹೊರಗೆ ಬಂದಿದ್ದಾನೆ. ಶನಿವಾರ ಮಧ್ಯಾಹ್ನ ಕೀರ್ತಿ ಬೋಯಿಕೇರಿ ಸಮೀಪದ ಸಿಂಕೋನದಲ್ಲಿರುವ ದೇವಸ್ಥಾನ ಹತ್ತಿರದ ತೋಟಕ್ಕೆ ತೆರಳಿದ್ದ.

 ಅಲ್ಲಿಂದ ಊರಿನಲ್ಲಿದ್ದ ತನ್ನ ಪತ್ನಿಗೆ ಲೈವ್ ವಿಡಿಯೋ ಕರೆ ಮಾಡಿ ಮಾತನಾಡುತ್ತಿದ್ದ ವೇಳೆ, ಮರಕ್ಕೆ ನೇಣು ಬಿಗಿದು ಪತ್ನಿಯ ಕಣ್ಣೆದುರಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಲಾಗಿದೆ.

What's Your Reaction?

Like Like 2
Dislike Dislike 2
Love Love 3
Funny Funny 0
Angry Angry 0
Sad Sad 5
Wow Wow 1