ಮರ ಕಪಾತ್: ಚೆಟ್ಟಳ್ಳಿಯಲ್ಲಿ ಕಾರ್ಮಿಕ ಸಾವು
ಮಡಿಕೇರಿ: ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿಯ ಕೊಂಗೇಟ್ಟಿರ ಕಾಫಿ ತೋಟದಲ್ಲಿ ಮರ ಕಪಾತ್ ಮಾಡುತ್ತಿದ್ದ ವೇಳೆ ಕಾರ್ಮಿಕನ ಮೇಲೆ ಮರ ಬಿದ್ದು, ಕಾರ್ಮಿಕನು ಸ್ಥದಲ್ಲಿಯೇ ಸಾವನ್ನಪ್ಪಿರುವ ಘಟನೆ ಚೆಟ್ಟಳ್ಳಿ ಸಮೀಪದ ಕಾಫಿ ಬೋರ್ಡ್ ಸಮೀಪದಲ್ಲಿರುವ ಕೊಂಗೇಟ್ಟಿರ ತೋಟದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಮೈಸೂರು ಜಿಲ್ಲೆಯ ನಂಜನಗೂಡುವಿನ ಕಾರ್ಮಿಕ ಮಣಿ ಎಂಬಾತ ದಾರುಣವಾಗಿ ಸಾವನಪ್ಪಿದ್ದು,ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಬೇರೆ ಕಾರ್ಮಿಕರು ಕಾಪಾತು ಮಾಡುತ್ತಿದ್ದ ಮರ ತುಂಡರಿಸಿ ಬಿದ್ದಿದ್ದು, ಅದರ ಹೊಡೆತ ಕ್ಕೆ ಸಿಲುಕಿ ಮಣಿ ಅಸು ನೀಗಿದ್ದಾರೆ.
What's Your Reaction?






