ವ್ಯಕ್ತಿ ಕಾಣೆಯಾಗಿದ್ದಾರೆ.

Apr 20, 2025 - 15:12
Apr 20, 2025 - 15:36
 0  36
ವ್ಯಕ್ತಿ ಕಾಣೆಯಾಗಿದ್ದಾರೆ.
ವ್ಯಕ್ತಿ ಕಾಣೆಯಾಗಿದ್ದಾರೆ.

ವಿರಾಜಪೇಟೆ: ಕಾಫಿ ತೋಟದ ಕಾರ್ಮಿಕನಾಗಿ ಕರ್ತವ್ಯ ನಿರ್ವಹಿಸುತಿದ್ದ ವ್ಯಕ್ತಿಯೋರ್ವ ಸ್ಥಳದಿಂದ ಕಾಣೆಯಾಗಿದ್ದಾರೆ.

ವಿರಾಜಪೇಟೆ ತಾಲೂಕು ಅಮ್ಮತ್ತಿ ಗ್ರಾಮದ ನಿವಾಸಿಯಾಗಿರುವ ಮಾಚಿಮಂಡ ಸುವೀನ್ ಮಾಚಯ್ಯ ಎಂಬುವವರ ಲೈನ್ ಮನೆಯಲ್ಲಿ ವಾಸವಿದ್ದ ಜೇನು ಕುರುಬರ ಲೇಟ್ ರಾಜು ಎಂಬುವವರ ಪುತ್ರ ಕೆ ದಿನೇಶ್ (28 ವರ್ಷ) ಕಾಣೆಯಾದ ವ್ಯಕ್ತಿ.

ಕಾಣೆಯಾದ ವ್ಯಕ್ತಿಯು ದಿನಾಂಕ 04-04-2025 ರಂದು ಮನೆಬಿಟ್ಟು ತೆರಳಿದ್ದಾನೆ. ಹಲವು ದಿನಗಳ ಹುಡುಕಾಟ ನಡೆಸಿದ ಕುಟುಂಬಸ್ಥರು, ಕೊನೆಗೆ ದೊರಕದಿದ್ದಾಗ ದಿನಾಂಕ 18-04-2025 ರಂದು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ವ್ಯಕ್ತಿ ಯ ತಾಯಿ ಜೇನುಕುರುಬರ ಜಾನು ಅವರು ವ್ಯಕ್ತಿಯು ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ್ದಾರೆ.

5.2 ಅಡಿ ಎತ್ತರ, ಎಣ್ಣೆ ಕೆಂಪು ಬಣ್ಣ, ಕನ್ನಡ ಕೊಡವ ಭಾಷೆ ಬಲ್ಲ ರಾಗಿದ್ದಾರೆ. ಈತನ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ. 08274-257462, ,257488, 229000 ಸ್ಥಳೀಯ ಪೊಲೀಸ್ ಠಾಣೆ ಗೆ ಅಥವಾ ದೂರವಾಣಿ ಸಂಖ್ಯೆ ಗಳಿಗೆ ಮಾಹಿತಿ ನೀಡುವಂತೆ ಆರಕ್ಷಕ ಇಲಾಖೆಯು ಮನವಿ ಮಾಡಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0