Kodagu

ನಾಳೆ ಆಲೂರುಸಿದ್ದಾಪುರ ಕೃಷಿ ಪತ್ತಿನ ಸಂಘದ ವಾರ್ಷಿಕ ಸಭೆ

admincoorgdaily

ಶನಿವಾರಸಂತೆ :-ಸಮಿಪದ ಆಲೂರುಸಿದ್ದಾಪುರ ಕೃಷಿ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ 20 ರಂದು ಶನಿವಾರ ಬೆಳಗ್ಗೆ 10.30 ಗಂಟೆಯಿಂದ ಸಂಘದ ಕಟ್ಟಡದಲ್ಲಿ ಸಂಘದ ಅಧ್ಯಕ್ಷ ಎಸ್.ಜೆ.ಪ್ರಸನ್ನಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈಗಾಗಲೇ ಸಂಘದ ಸದಸ್ಯರಿಗೆ ಅಹ್ವಾನ ಪತ್ರಿಕೆ ತಲುಪಿಸಲಾಗಿದೆ ಅಹ್ವಾನ ಪತ್ರಿಕೆ ತಲುಪದೆ ಇರುವವರು ಇದನ್ನೇ ಅಹ್ವಾನ ಎಂದು ಪರಿಗಣಿಸಿ ಸಂಘದ ವಾರ್ಷಿಕ ಮಹಾ ಸಭೆಗೆ ಆಗಮಿಸಿ ಮಹಾಸಭೆಯನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಪ್ರಕಟಣೆಯಲ್ಲಿ ಆಡಳಿತ ಮಂಡಳಿ ಅಪ್ಪಣೆ ಮೇರೆಗೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ. ಎಸ್. ಲೀಲಕುಮಾರ್ ತಿಳಿಸಿದ್ದಾರೆ.