ಬಿಜೆಪಿ‌ ಎಸ್.ಸಿ. ಮೋರ್ಚಾದಿಂದ ಮಹಾಪರಿನಿರ್ವಾಣ ದಿವಸ್ ಆಚರಣೆ

Dec 6, 2025 - 18:34
 0  162
ಬಿಜೆಪಿ‌ ಎಸ್.ಸಿ. ಮೋರ್ಚಾದಿಂದ ಮಹಾಪರಿನಿರ್ವಾಣ ದಿವಸ್ ಆಚರಣೆ

ಮಡಿಕೇರಿ: ಕೊಡಗು ಭಾರತೀಯ ಜನತಾ ಪಾರ್ಟಿ ಎಸ್.ಸಿ. ಮೋರ್ಚಾದಿಂದ ಭಾರತದ ಸಂವಿಧಾನದ ಶಿಲ್ಪಿ ಡಾ. ಭೀಮ್ ರಾವ್ ಅಂಬೇಡ್ಕರ್ ಪುಣ್ಯತಿಥಿಯ ನೆನಪಿಗಾಗಿ ಮಹಾಪರಿನಿರ್ವಾಣ ದಿವಸ್ ಅನ್ನು ಡಿಸೆಂಬರ್ 6ರಂದು ಮಡಿಕೇರಿಯ ಡಾ. ಬಿ.ಆರ್. ಅಂಬೇಡ್ಕರ್‌ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಆಚರಿಸಲಾಯಿತು.

 ಕಾರ್ಯಕ್ರಮದಲ್ಲಿ ಕೊಡಗು ಭಾರತೀಯ ಜನತಾ ಪಾರ್ಟಿ ಎಸ್.ಸಿ. ಮೋರ್ಚಾದ ಜಿಲ್ಲಾಧ್ಯಕ್ಷರಾದ ಪಿ.ಎಂ. ರವಿಯವರು ಮಾತನಾಡಿ ಡಿಸೆಂಬರ್ 6 ರಂದು ಆಚರಿಸಲಾಗುವ ಮಹಾಪರಿನಿರ್ವಾಣ ದಿವಸ್, ಭಾರತೀಯ ಸಂವಿಧಾನದ ಪಿತಾಮಹ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ಸೂಚಿಸುತ್ತದೆ.

ಡಾ. ಅಂಬೇಡ್ಕರ್ ಅವರು ಆಧುನಿಕ ಭಾರತವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಪ್ರಮುಖ ನಾಯಕರಾಗಿದ್ದರು. ಅವರು ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ಸಾಮಾಜಿಕ ಸುಧಾರಕ ಮತ್ತು ರಾಜಕಾರಣಿಯಾಗಿದ್ದರು. ಭಾರತೀಯ ಸಂವಿಧಾನವನ್ನು ರಚಿಸಿದ ಸಮಿತಿಯ ಅಧ್ಯಕ್ಷರಾಗಿ, ಡಾ. ಅಂಬೇಡ್ಕರ್ ಅವರು ಎಲ್ಲಾ ನಾಗರಿಕರಿಗೆ ನ್ಯಾಯ, ಸಮಾನತೆ ಮತ್ತು ಘನತೆಯನ್ನು ಖಚಿತಪಡಿಸಿಕೊಳ್ಳಲು ಅವಿಶ್ರಾಂತವಾಗಿ ಶ್ರಮಿಸಿದರು. ಸಂವಿಧಾನ ಸಭೆಗೆ ಅವರ ಕೊಡುಗೆಗಳು ಪ್ರಜಾಪ್ರಭುತ್ವ ಮತ್ತು ಎಲ್ಲರನ್ನೂ ಒಳಗೊಂಡ ಭಾರತಕ್ಕೆ ಅಡಿಪಾಯ ಹಾಕಿದವು. ಮಹಾಪರಿನಿರ್ವಾಣ ದಿವಸ್ ಅವರ ಅಸಾಧಾರಣ ಕೊಡುಗೆಗಳನ್ನು ಗೌರವಿಸುವ ಮತ್ತು ನ್ಯಾಯಯುತ ಮತ್ತು ಸಮಾನ ಸಮಾಜದ ಅವರ ದೃಷ್ಟಿಕೋನವನ್ನು ಪ್ರತಿಬಿಂಬಿಸುವ ದಿನವಾಗಿದೆ ಎಂದರು .

 ಕಾರ್ಯಕ್ರಮದ ಮೊದಲಿಗೆ ಎಸ್.ಸಿ. ಮೋರ್ಚಾದ ಮಡಿಕೇರಿ ಗ್ರಾಮಾಂತರ ಮಂಡಲದ ಪ್ರ. ಕಾರ್ಯದರ್ಶಿ, ಈರ ಸುಬ್ಬಯ್ಯ ಸ್ವಾಗತಿಸಿದರೆ, ಮಡಿಕೇರಿ ನಗರ ಮಂಡಲದ ಪ್ರ. ಕಾರ್ಯದರ್ಶಿ ಮಹೇಶ್‌ ವಂದಿಸಿದರು. ಕಾರ್ಯಕ್ರಮದಲ್ಲಿ ಎಸ್.ಸಿ. ಮೋರ್ಚಾದ ಪದಾಧಿಕಾರಿಯಾದ ಸಂದೀಪ್‌, ಸದಸ್ಯರುಗಳು, ವಿದ್ಯಾರ್ಥಿ ನಿಲಯದ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1