ಮಡಿಕೇರಿ ನಗರ ದಸರಾ ಅಲಂಕಾರ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ
admincoorgdaily
ಮಡಿಕೇರಿ:ದಸರಾ ಅಲಂಕಾರ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಮಡಿಕೇರಿ ನಗರದ ದಸರಾ ಸಮಿತಿ ಕಚೇರಿಯಲ್ಲಿ ನಡೆಯಿತು. ಅಲಂಕಾರ ಸಮಿತಿಯ ಅಧ್ಯಕ್ಷರಾದ ಮುನೀರ್ ಮಾಚರ್ ಎಂ.ಎ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗೌರವ ಸಲಹೆಗಾರರಾಗಿ ಮಂಜುನಾಥ್. ಪಿ. ಜಿ. ಉಪಾಧ್ಯಕ್ಷರಾಗಿ ರವಿಗೌಡ,ಪ್ರಧಾನ ಕಾರ್ಯದರ್ಶಿಯಾಗಿ ಕೋಚನ ಎಂ ಚೇತನ್, ಕಾರ್ಯದರ್ಶಿಯಾಗಿ ಭಾರತ್. ಜಿ. ಎನ್ ಸಹ ಕಾರ್ಯದರ್ಶಿಯಾಗಿ ಪುನೀತ್. ಜಿ.ಎನ್, ಖಜಾಂಜಿ ರಫೀಕ್ ( ದಾದಾ ),ಸಹ ಖಜಾಂಚಿ ಲಿಲ್ಲಿ ಗೌಡ,ಸಂಘಟನಾ ಕಾರ್ಯದರ್ಶಿ ಹರ್ಷಿತ್ ಕುಮಾರ್, ಸಂಚಾಲಕರುಗಳಾಗಿ ನವೀನ್. ಬಿ. ಕೆ ಹಾಗೂ ಕಲಿಲ್ ಭಾಷಾ ಅವರುಗಳನ್ನು ಆಯ್ಕೆ ಮಾಡಲಾಯಿತು.