ಚೆನ್ನಯ್ಯನ ಕೋಟೆಯಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

ಚೆನ್ನಯ್ಯನ ಕೋಟೆಯಲ್ಲಿ  ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

ಸಿದ್ದಾಪುರ :- ಚಾಲೆಂಜರ್ಸ್ ಯೂತ್ ಕ್ಲಬ್ ವತಿಯಿಂದ 6ನೇ ವರ್ಷದ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಚೆನ್ನಯ್ಯನ ಕೋಟೆ ಶಾಲಾ ಮೈದಾನದಲ್ಲಿ ಚಾಲನೆ ನೀಡಲಾಯಿತು. 

ಚನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರುಣ್ ಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಕ್ರೀಡಾಪಟುಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳು ಹಲವಾರು ಕ್ರೀಡಾಕೂಟಗಳನ್ನು ಗ್ರಾಮದಲ್ಲಿ ಆಯೋಜನೆ ಮಾಡುವದರ ಮೂಲಕ  

 ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಹೇಳಿದ ಅವರು ಚಾಲೆಂಜರ್ಸ್ ಯೂತ್ ಕ್ಲಬ್ ಕಳೆದ 6 ವರ್ಷಗಳಿಂದಲೂ ಕ್ರೀಡಾಕೂಟ ಆಯೋಜನೆ ಮಾಡಿ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು .

ಸಮಾಜ ಸೇವಕ ಕಳ್ಳಿಚಂಡ ಗೌತಮ್ ಕ್ರಿಕೆಟ್ ಪಂದ್ಯಾವಳಿ ಗೆ ಚಾಲನೆ ನೀಡಿ ಶುಭ ಹಾರೈಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶೀಲಾ,ಶಿಲ್ಫ,ವಿಜು, ಸಂಘದ ಅಧ್ಯಕ್ಷ ರವೀಂದ್ರ ಬಾವೆ ಪ್ರಮುಖರಾದ ಅರುಣ್,ಮೋಹನ್ ,ಅಬ್ದುಲ್ ಮುಜೀಬ್,ಅಬ್ದುಲ್ ಜಲೀಲ್,ಅಶ್ರಪ್,ಹರಿದಾಸ್ ,ರದೀಶ್ ಕುಮಾರ್ ಸೇರಿದಂತೆ ಆಟಗಾರರು, ಸ್ಥಳೀಯರು ಹಾಜರಿದ್ದರು.