ಹಾಡಿ ಮಕ್ಕಳ ವಾಲಿಬಾಲ್ ವೈಭವ:
ಸಿದ್ದಾಪುರ :-ಗ್ರಾಮೀಣ ಮಟ್ಟದ ಹಾಡಿ ಮಕ್ಕಳ ವಾಲಿಬಾಲ್ ಪಂದ್ಯಾವಳಿ ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ತಟ್ಟಳ್ಳಿ ಹಾಡಿಯಲ್ಲಿ ನಡೆಯಿತು.ಪ್ರೌಡ್ ಇಂಡಿಯನ್ ಸಂಸ್ಥೆ ವತಿಯಿಂದ ಅರಣ್ಯ ಹಕ್ಕು ಸಮಿತಿ ಸಹಕಾರದೊಂದಿಗೆ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಮಾಲ್ದಾರೆ, ಚನ್ನಯ್ಯನ ಕೊಟೆ ಪಂಚಾಯಿತಿ ವ್ಯಾಪ್ತಿಯ ತಟ್ಟಳ್ಳಿ, ದಿಡ್ಡಳ್ಳಿ, ಗೇಟ್ ಹಾಡಿ, ಚೊಟ್ಟೆ ಪಾರೆ ಹಾಡಿಯ ಹಲವು ತಂಡಗಳು ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು.
ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ಶಂಕರ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ ಗ್ರಾಮೀಣ ಭಾಗದ ಹಾಡಿ ಮಕ್ಕಳನ್ನು ಶಿಕ್ಷಣ ಹಾಗೂ ಕ್ರೀಡೆಯಿಂದ ಮುಂದೆ ತರಲು ಪ್ರೌಡ್ ಇಂಡಿಯನ್ ಸಂಸ್ಥೆ ಕ್ರೀಡಾಕೂಟವನ್ನು ಆಯೋಜನೆ ಮಾಡಿದ್ದು ಹಾಡಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದರು.
ಪ್ರೌಡ್ ಇಂಡಿಯನ್ ಸಂಸ್ಥೆಯ ಪ್ರಮುಖರಾದ ಸೆಂದಿಲ್ ಕುಮಾರ್ ಮಾತನಾಡಿ ಗ್ರಾಮೀಣ ಭಾಗದ ಹಾಡಿ ನಿವಾಸಿಗಳ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡುತ್ತಿದ್ದು ವಿದ್ಯುತ್ ಬೆಳಕು ಕಾಣದ ನಾಗರಹೊಳೆ ವ್ಯಾಪ್ತಿಯ ಹಾಡಿಯಗಳ ನಿವಾಸಿಗಳ ಮನೆಗೆ ಸೋಲಾರ್ ದೀಪ ಗಳನ್ನು ವಿತರಣೆ ಮಾಡಲಾಗಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಕ್ರೀಡಾ ಚಟುವಟಿಕೆಗಳಿಗೆ ಸಹಕಾರ ನೀಡಲಾಗುತ್ತಿದೆ.ಶಿಕ್ಷಣ, ಕ್ರೀಡೆಯೊಂದಿಗೆ ಸಮಾಜದ ಮುಖ್ಯ ವಾಹಿನಿಗೆ ತರಲು ಸಂಸ್ಥೆ ಶ್ರಮಿಸುತ್ತಿದೆ ಎಂದರು.
ಈ ಸಂದರ್ಭ ಪ್ರೌಡ್ ಇಂಡಿಯನ್ ಸಂಸ್ಥೆಯ ಪ್ರಮುಖರಾದ ಕಾರ್ತಿಕ್, ಶರ್ಜುನ್, ಸೋಮಸುಂದರ್,ರಮ್ಯ ರ್ಯಾಲಿ ಇಂಡಿಯಾ ಸಂಸ್ಥೆಯ ಕಿಶೋರ್ ಸೇರಿದಂತೆ ಹಾಡಿಯ ಪ್ರಮುಖರು ಹಾಜರಿದ್ದರು.
What's Your Reaction?






