ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟ ಆಯೋಜನೆ ಪರಸ್ಪರ ಜನರು ಬೆರೆಯಲು ಸಹಕಾರಿ: ಎ.ಎಸ್ ಪೊನ್ನಣ್ಣ.

Apr 20, 2025 - 19:03
Apr 20, 2025 - 19:28
 0  2
ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟ ಆಯೋಜನೆ ಪರಸ್ಪರ ಜನರು ಬೆರೆಯಲು ಸಹಕಾರಿ: ಎ.ಎಸ್ ಪೊನ್ನಣ್ಣ.
ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟ ಆಯೋಜನೆ ಪರಸ್ಪರ ಜನರು ಬೆರೆಯಲು ಸಹಕಾರಿ: ಎ.ಎಸ್ ಪೊನ್ನಣ್ಣ.

ಸಿದ್ದಾಪುರ:,ಚೆನ್ನಯ್ಯನಕೋಟೆಯ ಚಾಲೆಂಜರ್ಸ್ ಯೂತ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ದಭಾಗವಹಿಸಿ ಶುಭ ಕೋರಿದರು.

ಚೆನ್ನಯ್ಯನಕೋಟೆಯ ಶಾಲಾ ಮೈದಾನದಲ್ಲಿ ಆಯೋಜನೆಗೊಂಡಿದ್ದ ಕ್ರಿಕೆಟ್ ಪಂದ್ಯಾಟಕ್ಕೆ ಆಯೋಜಕರ ಆಹ್ವಾನದ ಮೇರೆಗೆ ತೆರಳಿದ ಮಾನ್ಯ ಶಾಸಕರು ಹಲವು ಸಮಯ ಕ್ರಿಕೆಟ್ ಪಂದ್ಯಾಟವನ್ನು ವೀಕ್ಷಿಸಿದರು.

 ಕ್ರಿಕೆಟ್ ಆಟಗಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಕ್ರೀಡೆಯು ಜೀವನದ ಒಂದು ಭಾಗವಾಗಿದ್ದು ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಂತೆಯೇ ಸಮಾಜಮುಖಿ ಕಾರ್ಯಗಳತ್ತವೂ ಯುವಜನತೆ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.  ಇಂತಹ ಗ್ರಾಮೀಣ ಭಾಗದಲ್ಲಿ ಕ್ರಿಕೆಟ್ ಪಂದ್ಯಾಟ ಆಯೋಜನೆಗೊಂಡಿರುವುದು ಪರಸ್ಪರ ಜನರು ಬೆರೆಯುವಂತೆ ಮಾಡುತ್ತದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ವೇದಿಕೆ ಮೇಲೆ ಉಪಸ್ಥಿತರಿರುವ ಆಹ್ವಾನಿತ ಅತಿಥಿಗಳು,ಕಾರ್ಯಕ್ರಮ ಆಯೋಜಕರು ಹಾಗೂ ಕ್ರಿಕೆಟ್ ಪ್ರೇಮಿಗಳು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0