ಕುಶಾಲನಗರ: ಕರವೇ ತಾಲ್ಲೂಕು ಮಟ್ಟದ ಪದಗ್ರಹಣ ಕಾರ್ಯಕ್ರಮ

Nov 18, 2025 - 21:05
 0  291
ಕುಶಾಲನಗರ: ಕರವೇ ತಾಲ್ಲೂಕು ಮಟ್ಟದ ಪದಗ್ರಹಣ ಕಾರ್ಯಕ್ರಮ

ಕುಶಾಲನಗರ:ಕರ್ನಾಟಕ ರಕ್ಷಣ ವೇದಿಕೆ (ಪ್ರವೀಣ್ ಶೆಟ್ಟಿ ಬಣ ) ಇವರ ವತಿಯಿಂದ ತಾಲ್ಲೂಕು ಮಟ್ಟದ ಪದಗ್ರಹಣ, ಸಂಘಟನೆಯ ಬಲವರ್ಧನೇ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ವನ್ನು ಕುಶಾಲನಗರದ ಖಾಸಗಿ ಕಟ್ಟಡದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಎಂ ಆಸಿಫ್ ರವರ ನೇತೃತ್ವದಲ್ಲಿ ಆಯೋಜಿಸಲಾಯಿತುಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಹಿರಿಯ ಪತ್ರಕರ್ತ ಎಸ್. ಎ ಮುರಳಿಧರ್ ರವರು ಚಾಲನೆ ನೀಡಿದರು.

ಪ್ರಸ್ತಾವಿಕವಾಗಿ  ರವೀಶ್ ಮಾತನಾಡಿದರು.ಇದೇ ಸಂದರ್ಭ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ್,ಜಿಲ್ಲಾ ಮಹಿಳಾ ಅಧ್ಯಕ್ಷ ಸಂಧ್ಯಾ ಗಣೇಶ್, ನಗರ ಅಧ್ಯಕ್ಷೆ ರೇಣುಕಾ, ತಾಲೂಕು ಅಧ್ಯಕ್ಷೆ ಶಶಿಕಲಾ, ಸೋಮವಾರಪೇಟೆ ನಗರ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷೆ ಶ್ರುತಿ ಗಿರೀಶ್ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0