ತೃತೀಯ ಲಿಂಗಿಗಳ ತಳಮಟ್ಟದ ಸಮೀಕ್ಷೆಗಾಗಿ ಎ.ಎಸ್ ಪೊನ್ನಣ್ಣ ಅವರಿಗೆ ಮನವಿ

ಬೆಂಗಳೂರು:ರಾಜ್ಯದಲ್ಲಿರುವ ತೃತೀಯ ಲಿಂಗಿಗಳ ಸಮಗ್ರ ಸಮೀಕ್ಷೆ ಆಗಬೇಕೆಂದು, ತೃತೀಯಲಿಂಗಿಗಳ ಪ್ರತಿನಿಧಿ ಮಲ್ಲಿಯವರು, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣರವರಿಗೂ ಮನವಿ ನೀಡಲಾಯಿತು.ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು, ತಮ್ಮ ಆಪ್ತ ಕಾರ್ಯದರ್ಶಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿರವರೊಂದಿಗೆ ಮಾತನಾಡಿ, ಒಂದು ವಾರದೊಳಗೆ ಸಮೀಕ್ಷೆಗೆ ಚಾಲನೆ ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ವಕೀಲರಾದ ಲಕ್ಷ್ಯ ಕಾಳಪ್ಪ ರವರು ಉಪಸ್ಥಿತರಿದ್ದರು.
What's Your Reaction?






