ಕೊಡಗಿನ ಬೈತೂರಪ್ಪ ಊಟು ಉತ್ಸವ ಆರಂಭ;ಜ.26ರವರೆಗೆ ನಡೆಯಲಿರುವ ಉತ್ಸವ
ವಿರಾಜಪೇಟೆ:ಕೇರಳ ರಾಜ್ಯದ ಇರಿಟ್ಟಿಯ ಉಳಿಕ್ಕಲ್ನಲ್ಲಿರುವ ವಾಯತೂರು ಕಲಿಯಾರ್ ದೇವಸ್ಥಾನದಲ್ಲಿ (ಕೊಡಗಿನ ಬೈತೂರಪ್ಪ)ಈ ವರ್ಷದ ಊಟು ಉತ್ಸವ ಜ.13ರ ಸಂಜೆ ಅಕ್ಕಿ ಅಳೆಯುವ ಶಾಸ್ತ್ರ ಮಾಡುವುದರೊಂದಿಗೆ ಆರಂಭವಾಯಿತು.
ಬಳಿಕ ಅಗ್ನಿಕುಂಡಕ್ಕೆ ಅಗ್ನಿ ಇಡುವುದರೊಂದಿಗೆ ಹಬ್ಬಕ್ಕೆ ಚಾಲನೆ ನೀಡಲಾಯಿತು. ಉತ್ಸವವು ಜ. 26 ರವರೆಗೆ ಮುಖ್ಯ ಸಮಾರಂಭಗಳು ಮತ್ತು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯುತ್ತದೆ. ಜ.22 ರಂದು ಪುಗ್ಗೇರ ಮನೆಯವರ ಕಡೆಯಿಂದ ಅಕ್ಕಿ ಅಳೆಯುವ ಶಾಸ್ತ್ರ ನಡೆಯಲಿದ್ದು ಮೂರು ದಿನಗಳ ಕಾಲ ಕೊಡಗಿನವರ ಹಬ್ಬ ನಡೆಯಲಿದ್ದು ದೇವಾಲಯದಲ್ಲಿ ಕೊಡಗಿನವರಿಗೆ ವಿಶೇಷ ಪ್ರಾದಾನ್ಯತೆ ನೀಡಲಾಗುತ್ತಿದ್ದು ಕೊಡಗಿನ ಸಾಂಪ್ರಾದಾಯಿಕ ನೃತ್ಯ ಮತ್ತು ಪೂಜಾ ಕಾರ್ಯಕ್ರಮಗಳು ನಡೆಯುತ್ತದೆ.
ಜ.14 ರಂದು ಮಕರ ಸಂಕ್ರಮಣ ಪೂಜೆ ಹಾಗೂ ವಿವಿಧ ಪೂಜೆಗಳು ನೈವೇದ್ಯ ಸಮರ್ಪಣೆ ನಡೆಯಿತು.
15 ರಂದು ಶ್ರೀ ಭೂತಬಲಿ, ವಿಶೇಷ ಪೂಜೆಗಳು ಮತ್ತು ನೈವೇದ್ಯಗಳು ನಡೆದು ಸಂಜೆ ಚೆಂಬೊಟ್ಟಿಪಾರದಿಂದ ದೇವಸ್ಥಾನಕ್ಕೆ ಊಟು ಮೆರವಣಿಗೆ ನಡೆಯಿತು. ಬಳಿಕ ತಿರುವಾದಿರ ನೃತ್ಯ, ಕೈಕೊಟ್ಟಿಕಳಿ, ಕೋಲ್ಕಳಿ ಕಲಾಮಂಡಲ ಕಾರ್ತಿಕ್ ಶಂಕರ್ ಅವರ ಊಟನ್ ತುಳ್ಳಲ್ ನಡೆಯಿತು.
16 (ಇಂದು)ರಂದು ಸಂಜೆ 7 ಗಂಟೆಗೆ ಕರೋಕೆ ಭಕ್ತಿಗೀತೆ ಉತ್ಸವ, ತಿರುವಾದಿರಕ್ಕಳಿ ನಡೆಯಲಿದೆ. 18 ರಂದು ಸಂಜೆ 7 ಗಂಟೆಗೆ ಸಿನಿಮೀಯ ನೃತ್ಯ, ಮಕ್ಕಳ ಕಲಾ ಸಂಜೆ, ಮತ್ತು 19 ರಂದು ರಾತ್ರಿ ನೃತ್ಯ ಸಂಜೆ, ಭರತನಾಟ್ಯ ಇತ್ಯಾದಿಗಳು ನಡೆಯಲಿವೆ. 20 ರಂದು ಸಂಜೆ 7 ಗಂಟೆಗೆ ಉಲಿಕ್ಕಲ್ ತಪಸ್ಯ ಕಲಾಕ್ಷೇತ್ರಂ ಅವರಿಂದ ನೃತ್ಯ ಸಂಜೆ ನಡೆಯಲಿದೆ. 21 ರಂದು ಸಂಜೆ 7 ಗಂಟೆಗೆ ನೃತ್ಯ ಶಿಲ್ಪ ಮತ್ತು ಅಥೇನಾ ನಾಟಕ ನಟ್ಟರಿವ್ ಅನ್ನು ಪ್ರಸ್ತುತಪಡಿಸುವ ನಟ್ಟುಮೋಶಿ ನಾಡನ್ಪಟ್ಟು ಮೇಳ ನಡೆಯಲಿದೆ.
22 ರಂದು ಬೆಳಿಗ್ಗೆ ಕೊಡಗಿನ ಪುಗ್ಗೇರ ಕುಟುಂಬದವರ ಅರಿಯಳವು,(ಅಕ್ಕಿ ಅಳೆಯುವ ಶಾಸ್ತç). ಸಂಜೆ 7 ಗಂಟೆಗೆ ನಡೆಯಲಿರುವ ಸಾಂಸ್ಕೃತಿಕ ಸಮ್ಮೇಳನವನ್ನು ಕರ್ನಾಟಕ ದೇವಸ್ವಂ( ಮುಜರಾಯಿ ಇಲಾಖೆ) ಸಚಿವ ರಾಮಲಿಂಗ ರೆಡ್ಡಿ ಉದ್ಘಾಟಿಸಲಿದ್ದಾರೆ. ಇದರ ನಂತರ ಕಂಜರಪ್ಪಳ್ಳಿ ಅಮಲ ಅವರಿಂದ ಗೀತೋತ್ಸವ ನಡೆಯಲಿದೆ.
23 ರಂದು ಕೊಡಗಿನ ಜನರಿಂದ ಅರಿಯಳವು ಮತ್ತು ವೃಷಭಂಜಲಿ ನಡೆಯಲಿದ್ದು, ರಾತ್ರಿ 8.30 ಕ್ಕೆ ಪರಿಶಿಷ್ಟ ಪಂಗಡದ ಶ್ರೀಕಾಣಿಕೆ ಶೋಭಾಯಾತ್ರೆ, ರಾತ್ರಿ 9 ಗಂಟೆಗೆ ವೆಟ್ಟಕ್ಕೊರುಮಕನ್ ದೇವಸ್ಥಾನದಲ್ಲಿ ಕಲಾಮೆಳುತ್ತು, ಹಾಡು ಮತ್ತು ತೆಂಗಿನಕಾಯಿ ಒಡೆಯುವ ಕಾರ್ಯಕ್ರಮ ನಡೆಯಲಿದೆ.
24 ರಂದು ಮಕರಂ 10 ರಂದು ಹಬ್ಬದ ದಿನವಾಗಿದ್ದು ಬೆಳಿಗ್ಗೆ ವಿವಿಧ ನೆಯ್ಯಮೃತ ಮಠಗಳಿಂದ ನೆಯ್ಯಮೃತ ಭಕ್ತರಿಂದ ಮೆರವಣಿಗೆ, ಮಧ್ಯಾಹ್ನ ತಡಂಬು ನೃತ್ಯವಿದ್ದು, ಸಂಜೆ 6.30 ಕ್ಕೆ ಪಡಿಯೂರಿನ ಜನರ ಓಮನಕಜ್ಛೆಯ ನಂತರ 7.30 ಗಂಟೆಗೆ ಕೊಡಗಿನ ಉಮ್ಮತ್ತಾಟ್, ವೇದಿಕೆಯಲ್ಲಿ ವಿವಿಧ ನೃತ್ಯ ಕಾರ್ಯಕ್ರಮಗಳು ಉಳಿಕಲ್ಲುವಿನಿಂದ ದೇವಸ್ಥಾನದವರೆಗೆ ತಾಲಪೋಲಿ ಮೆರವಣಿಗೆ ನಡೆಯಲಿದೆ.
25 ರಂದು ಬೆಳಿಗ್ಗೆ ನೆಯ್ಯಾಟಂ ಮತ್ತು ಕೊಡಗಿನ ತಕ್ಕರುಗಳ ಸಾಂಪ್ರಾದಾಯಿಕ ಭೇಟಿ ಮಧ್ಯಾಹ್ನ ನೆಯ್ಯಮೃತ್ ವ್ರತಕಾರರ ಆಟೀಲೂನ್ ಮತ್ತು ಸಂಜೆ 5 ಗಂಟೆಗೆ ತಿಡಂಬ ನೃತ್ಯ ನಡೆಯಲಿದೆ.
26 ರಂದು ಪಲ್ಲಿವೆಟ್ಟ ಮೆರವಣಿಗೆ, ತಿಡಂಬ ನೃತ್ಯ, ಸಂಜೆ ತಿಡಂಬ ನೃತ್ಯ ನಡೆಯಲಿದೆ. 28 ರಂದು ನೀಲಕರಿಂಗಳಿ ಕಾವಿಲ್ ತೆಯ್ಯಂ, ಮತ್ತು ದೇವಸ್ಥಾನ ಮತ್ತು ಕೂಲೋತ್ಗೆ ಭಗವತಿಯ ಮೆರವಣಿಗೆ ನಡೆಯಲಿದೆ. ಇದರೊಂದಿಗೆ ಈ ವರ್ಷದ ಉತ್ಸವಕ್ಕೆ ತೆರೆ ಎಳೆದು ಧ್ವಜ ಇಳಿಸಲಾಗುತ್ತದೆ.
ವರದಿ;ರಜಿತ ಕಾರ್ಯಪ್ಪ