ಪೊನ್ನಂಪೇಟೆ: ದೇವನೂರು-ಮಲ್ಲೂರು ರಸ್ತೆ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿದ ಎ.ಎಸ್ ಪೊನ್ನಣ್ಣ: 15 ಲಕ್ಷದ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ

Jun 8, 2025 - 19:53
 0  32
ಪೊನ್ನಂಪೇಟೆ: ದೇವನೂರು-ಮಲ್ಲೂರು ರಸ್ತೆ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿದ ಎ.ಎಸ್ ಪೊನ್ನಣ್ಣ:   15 ಲಕ್ಷದ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ

ಪೊನ್ನಂಪೇಟೆ:ತಾಲೂಕಿನ ಬಾಳೆಲೆ ಗ್ರಾಮದ, ದೇವನೂರು-ಮಲ್ಲೂರಿಗೆ ತೆರಳುವ ರಸ್ತೆ ಕಾಮಗಾರಿಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎ.ಎಸ್ ಪೊನ್ನಣ್ಣ ರವರು ಭೂಮಿ ಪೂಜೆ ನೆರವೇರಿಸಿದರು.   

ಕಳೆದ ಹಲವು ವರ್ಷಗಳಿಂದ ಸುರಿದ ವಿಪರೀತ ಮಳೆಯ ಕಾರಣ ಈ ಭಾಗದ ರಸ್ತೆಯು ತೀವ್ರವಾಗಿ ಹದಗೆಟ್ಟಿರುವುದನ್ನು ಮನಗಂಡ ಮಶಾಸಕರು ತಮ್ಮ ಅನುದಾನದಲ್ಲಿ ₹ 15 ಲಕ್ಷ ಮೀಸಲಿಟ್ಟು, ಈ ರಸ್ತೆಯ ಉನ್ನತೀಕರಣಕ್ಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇಂದು ಬಾಳೆಯಲೆಗೆ ಆಗಮಿಸಿದ ಸಂದರ್ಭ ಸದರಿ ರಸ್ತೆಯ ಉನ್ನತೀಕರಣಕ್ಕೆ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು ಚಾಲನೆ ನೀಡಿದರು.  

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರುಣ್ ಮಾಚಯ್ಯ, ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್,ಬಾಳಲೆ ವಲಯ ಅಧ್ಯಕ್ಷರಾದ ಕೋದಂಡ ಸೋಮಣ್ಣ,ನಿಟ್ಟೂರು ವಲಯ ಅಧ್ಯಕ್ಷರಾದ ಪವನ್,ಮಾಯಮುಡಿ ವಲಯ ಅಧ್ಯಕ್ಷರಾದ ಟಾಟು ಮೊಣ್ಣಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಾನಂಡ ಪ್ರತ್ಯು,ಹಿರಿಯ ಕಾಂಗ್ರೆಸ್ಸ್ ನ ತಾರ ಅಯ್ಯಮ್ಮ,ಬಾಳಲೆ ಪಂಚಾಯಿತಿ ಸದಸ್ಯರಾದ ವಿನು ಉತ್ತಪ್ಪ, ಪಕ್ಷದ ಪ್ರಮುಖರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0