ಸಹಕಾರ ಸಂಘದ ನೌಕರರ ಗ್ರಾಮೀಣ ಕ್ರೀಡಾಕೂಟ:ಕ್ರೀಡೆಯಿಂದ ಮಾನಸಿಕ ಒತ್ತಡ ಕಡಿಮೆ ಶಾಸಕ ಎ.ಎಸ್ ಪೊನ್ನಣ್ಣ

ಗೋಣಿಕೊಪ್ಪ:ಇಲ್ಲಿನ ಪ್ರಾಥಮಿಕ ಶಾಲಾ ಮೈದಾನದಲ್ಲಿ, ಸಹಕಾರ ಸಂಘಗಳ ನೌಕರರ ಗ್ರಾಮೀಣ ಕ್ರೀಡಾಕೂಟ 2025 ಕಾರ್ಯಕ್ರಮದಲ್ಲಿ, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿ ಕ್ರೀಡಾ ಕೂಟದಲ್ಲಿ ಪಾಲ್ಗೊಂಡವರನ್ನು ಉದ್ದೇಶಿಸಿ ಮಾತನಾಡಿದರು.
ಸಹಕಾರ ಸಂಘದ ನೌಕರರಿಗೆ ವರ್ಷಪೂರ್ತಿ ತಮ್ಮ ಕೆಲಸ ಕಾರ್ಯಗಳಲ್ಲಿ ಸದಾ ಮಗ್ಧರಾಗಿರುವಂತಹ ಸನ್ನಿವೇಶ ಇದ್ದು, ಇಂತಹ ಕ್ರೀಡಾಕೂಟಗಳು ಅವರಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರಾಮ ನೀಡಿ, ಮತ್ತಷ್ಟು ಉಲ್ಲಾಸದಿಂದ ಕೆಲಸ ಮಾಡಲು ಸಹಕಾರಿ ಯಾಗಲಿದೆ ಎಂದು ಹೇಳಿದರು. ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲರಿಗೂ ವಿಶೇಷ ಶುಭಾಶಯಗಳು ಹೇಳಿದ ಮಾನ್ಯ ಶಾಸಕರು ಎಲ್ಲರ ಸರ್ವತೋಮುಖ ಅಭಿವೃದ್ಧಿಗೆ ಇಂತಹ ಕ್ರೀಡಾಕೂಟಗಳು ನಾಂದಿಯಾಗಲಿ ಎಂದು ಕರೆ ನೀಡಿದರು. ಬಳಿಕ ಕ್ರೀಡಾ ಕೂಟದ ಆಯೋಜಕರು ಮಾನ್ಯ ಶಾಸಕರಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗೋಣಿಕೊಪ್ಪ ಪಂಚಾಯಿತಿ ಅಧ್ಯಕ್ಷರಾದ ಪ್ರಮೋದ್ ಗಣಪತಿ,ಕಾರ್ಯಕ್ರಮ ಆಯೋಜಕರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
What's Your Reaction?






