ಚಲಿಸುವ ರೈಲು ಏರಲು ಹೋಗಿ, ಹಳಿಗೆ ಬಿದ್ದ ಪ್ರಯಾಣಿಕ; ಇನ್ನೇನು ರೈಲು ಬರುತ್ತಿತ್ತು, ಮುಂದೇನಾಯ್ತು?

ಚಲಿಸುವ ರೈಲು ಏರಲು ಹೋಗಿ, ಹಳಿಗೆ ಬಿದ್ದ ಪ್ರಯಾಣಿಕ; ಇನ್ನೇನು ರೈಲು ಬರುತ್ತಿತ್ತು, ಮುಂದೇನಾಯ್ತು?
Photo credit: Times of India

ಆಗ್ರಾ: ಉತ್ತರ ಪ್ರದೇಶದ ಅಲಿಗಢ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 4ರಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಬಹುದಾದ ರೈಲು ಹಳಿಯ ಮೇಲೆ ಬಿದ್ದ ಪ್ರಯಾಣಿಕರೊಬ್ಬರನ್ನು ಆರ್‌ಪಿಎಫ್ ಸಿಬ್ಬಂದಿ ರಕ್ಷಿಸಿದ ಘಟನೆ ನಡೆದಿದೆ.

ರಕ್ಷಣೆ ಮಾಡಿದ ಸಿಬ್ಬಂದಿಯನ್ನು ಆರ್ ಪಿ ಎಫ್ ಕಾನ್‌ಸ್ಟೆಬಲ್ ಬನ್ವಾರಿ ಲಾಲ್ ಗೆ ಮೆಚ್ಚುಗೆ ಹರಿದು ಬಂದಿದೆ.

ಅಲಿಗಢ ಮೂಲದ ಇರ್ಫಾನ್ ಎಂಬ ಪ್ರಯಾಣಿಕ ಚಲಿಸುತ್ತಿದ್ದ ರೈಲಿಗೆ ಏರಲು ಪ್ರಯತ್ನಿಸುವಾಗ ಸಮತೋಲನ ಕಳೆದುಕೊಂಡು ಪ್ಲಾಟ್‌ಫಾರ್ಮ್ ಮೇಲೆ ಬಿದ್ದರು. ಕೇವಲ ಕೆಲವೇ ಕ್ಷಣಗಳಲ್ಲಿ ರೈಲು ಅವರ ಮೇಲೆಯೇ ಸಂಚರಿಸುವ ಸಾಧ್ಯತೆ ಇತ್ತು. ಕೂಡಲೇ ಕಾರ್ಯಪ್ರವೃತ್ತರಾದ, ಸ್ಥಳದಲ್ಲಿದ್ದ ಕಾನ್‌ಸ್ಟೆಬಲ್ ಬನ್ವಾರಿ ಲಾಲ್ ಇರ್ಫಾನ್ ಅವರನ್ನು ಎಳೆದು ರಕ್ಷಣೆ ಮಾಡಿದರು.

ಅಧಿಕಾರಿಗಳ ಪ್ರಕಾರ, ಈ ತ್ವರಿತ ಕ್ರಮ ನಡೆಯದಿದ್ದರೆ ಇರ್ಫಾನ್ ಗಂಭೀರವಾಗಿ ಗಾಯಗೊಳ್ಳುವ ಅಥವಾ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯಿತ್ತು.

ಈ ಘಟನೆಗೆ ಸಂಬಂಧಿಸಿದ ವಿಡಿಯೋ ದೃಶ್ಯಗಳು ರಾತ್ರಿ ವೇಳೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ವ್ಯಾಪಕವಾಗಿ ವೈರಲ್ ಆಗಿದ್ದು, ಕಾನ್‌ಸ್ಟೆಬಲ್ ಬನ್ವಾರಿ ಲಾಲ್ ಅವರ ನಡೆಗೆ ಸಾರ್ವಜನಿಕರಿಂದ ಹಾಗೂ ಅಧಿಕಾರಿಗಳಿಂದ ಪ್ರಶಂಸೆ ಹರಿದು ಬಂದಿದೆ.