ಕೆಮ್ಮಿನ ಸಿರಪ್ ಅವಾಂತರ | 6 ಮಕ್ಕಳ ಮೃತ್ಯು: ಕೆಮ್ಮಿನ ಸಿರಪ್‌ ಗಳ ಮೇಲೆ ಆರೋಗ್ಯ ಇಲಾಖೆಯಿಂದ ತನಿಖೆ

ಕೆಮ್ಮಿನ ಸಿರಪ್ ಅವಾಂತರ | 6 ಮಕ್ಕಳ ಮೃತ್ಯು:    ಕೆಮ್ಮಿನ ಸಿರಪ್‌ ಗಳ ಮೇಲೆ ಆರೋಗ್ಯ ಇಲಾಖೆಯಿಂದ ತನಿಖೆ
Photo credit: INDIA TODAY

ಛಿಂದ್ವಾರ/ಜೈಪುರ್: ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಆರು ಮಕ್ಕಳು ಶಂಕಿತ ಮೂತ್ರಪಿಂಡದ ಸೋಂಕಿನಿಂದ ಸಾವನ್ನಪ್ಪಿದ ಘಟನೆ ರಾಜ್ಯವನ್ನು ಕಂಗೊಳಿಸಿದೆ. ಈ ಪ್ರಕರಣಗಳಲ್ಲಿ ಮಕ್ಕಳಿಗೆ ಕೋಲ್ಡ್ರಿಫ್ ಮತ್ತು ನೆಕ್ಸ್ಟ್ರೋ-ಡಿಎಸ್ ಸೇರಿದಂತೆ ಎರಡು ವಿಧದ ಕೆಮ್ಮಿನ ಸಿರಪ್ ನೀಡಲಾಗಿತ್ತು.

ಇದಾದ ನಂತರ, ಜಿಲ್ಲಾಡಳಿತವು ಈ ಸಿರಪ್ ಗಳ ಬಳಕೆಯನ್ನು ತಕ್ಷಣ ನಿಷೇಧಿಸಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ (NCDC) ತಂಡವು ಸ್ಥಳಕ್ಕೆ ತೆರಳಿ ಮಾದರಿಗಳನ್ನು ಸಂಗ್ರಹಿಸಿದೆ.

ಆಗಸ್ಟ್ 24 ರಂದು ಮೊದಲ ಶಂಕಿತ ಪ್ರಕರಣ ದಾಖಲಾಗಿದ್ದು, ಸೆಪ್ಟೆಂಬರ್ 7 ರಂದು ಮೊದಲ ಸಾವು ಸಂಭವಿಸಿದೆ ಎಂದು ಹಂಗಾಮಿ CMHO ಡಾ. ನರೇಶ್ ಗುನ್ನಾಡೆ ತಿಳಿಸಿದ್ದಾರೆ. ಮಕ್ಕಳಲ್ಲಿ ತೀವ್ರ ಜ್ವರ ಹಾಗೂ ಮೂತ್ರ ವಿಸರ್ಜನೆ ತೊಂದರೆ ಸಾಮಾನ್ಯ ಲಕ್ಷಣಗಳಾಗಿದ್ದವು. ರಾಜ್ಯ ಆರೋಗ್ಯ ಇಲಾಖೆಯು ಈಗ ನೀರು, ಕೀಟಶಾಸ್ತ್ರ ಹಾಗೂ ಔಷಧ ಮಾದರಿಗಳನ್ನು ಪರಿಶೀಲನೆಗೆ ಕಳುಹಿಸಿದ್ದು, ಸಿರ ಪ್‌ನ ಗುಣಮಟ್ಟ ಪರೀಕ್ಷೆಯನ್ನೂ ನಡೆಸುತ್ತಿದೆ.

ರಾಜಸ್ಥಾನದಲ್ಲೂ ಪ್ರಕರಣಗಳು ಈ ನಡುವೆ, ರಾಜಸ್ಥಾನದಲ್ಲೂ ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ. ಸಿಕಾರ್ ಜಿಲ್ಲೆಯ ಶ್ರೀಮಧೋಪುರದಲ್ಲಿ ಐದು ವರ್ಷದ ಬಾಲಕನೊಬ್ಬ ಉಚಿತ ಔಷಧಿ ಯೋಜನೆಯಡಿಯಲ್ಲಿ ದೊರೆತ ಡೆಕ್ಸ್ಟ್ರೋಮೆಥೋರ್ಫಾನ್ ಹೈಡ್ರೋಬ್ರೋಮೈಡ್ ಸಿರಪ್ ಸೇವಿಸಿದ ಬಳಿಕ ಸಾವನ್ನಪ್ಪಿದ್ದಾನೆ. ಭರತ್‌ಪುರ ಮತ್ತು ಸಂಗನೇರ್‌ನಲ್ಲಿ ಹಲವಾರು ಮಕ್ಕಳು ಅಸ್ವಸ್ಥರಾಗಿದ್ದು, ಜೈಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭರತ್‌ಪುರದ ಸರ್ಕಾರಿ ಆಸ್ಪತ್ರೆಯ ವೈದ್ಯನೊಬ್ಬನಿಗೂ ಇದೇ ಸಿರಪ್ ಸೇವಿಸಿದ ಬಳಿಕ ತೊಂದರೆ ಉಂಟಾಗಿದೆ.