ಕೊಡಗು ಗೌಡ ಸಮಾಜದ ನೂತನ‌ ಅಧ್ಯಕ್ಷರಾಗಿ ದಂಬೆಕೋಡಿ‌ ಎಸ್.ಆನಂದ್ ಅವಿರೋಧ ಆಯ್ಕೆ

ಕೊಡಗು ಗೌಡ ಸಮಾಜದ ನೂತನ‌ ಅಧ್ಯಕ್ಷರಾಗಿ ದಂಬೆಕೋಡಿ‌ ಎಸ್.ಆನಂದ್ ಅವಿರೋಧ ಆಯ್ಕೆ

ಮಡಿಕೇರಿ: ಕೊಡಗು ಗೌಡ ಸಮಾಜಕ್ಕೆ ೨೦೨೬-೨೮ರ ಅವಧಿಗೆ ನೂತನ ಆಡಳಿತ ಮಂಡಳಿ ಅವಿರೋಧವಾಗಿ ಆಯ್ಕೆಯಾಗಿದೆ ಎಂದು ಕೊಡಗು ಗೌಡ ಸಮಾಜದ ಅಧ್ಯಕ್ಷರಾಗಿ ಆಯ್ಕೆಯಾದ ದಂಬೆಕೋಟಿ ಎಸ್.ಆನಂದ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಾಧ್ಯಕ್ಷರಾಗಿ ಸೂರ್ತಲೆ ಆರ್.ಸೋಮಣ್ಣ, ಕಾರ್ಯದರ್ಶಿ ಪೊಳಕಂಡ ಎಂ.ಸಂದೀಪ್, ಖಜಾಂಚಿಯಾಗಿ ಕಾಲೇರಮ್ಮನ ನಂದಕುಮಾರ್ ಆಯ್ಕೆಯಾಗಿದ್ದಾರೆ. ನಿದೇರ್ಶಕರಾಗಿ ಅಮೆ ಸೀತರಾಮ್, ಪೊನ್ನಚ್ಚನ ಮಧುಸೂದನ್, ಕೊಲ್ಯದ ಗಿರೀಶ್, ಹುದೇರಿ ರಾಜೇಂದ್ರ, ಪೈಕೆರ ಮನೋಹರ್, ಪೇರಿಯಾನ ಘನಶ್ಯಾಮ್, ತೋಟಂ ಬೈಲು ಅನಂತಕುಮಾರ್, ಮಂದ್ರಿರ ತೇಜಸ್, ಕೊಂಬನ ಪ್ರವೀಣ್, ಚೊಕ್ಕಾಡಿ ಪ್ರೇಮ ರಾಘವಯ್ಯ, ಮೂಮಜಲು ಅಮಿತ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

 ಸುದ್ದಿಗೋಷ್ಠಿಯಲ್ಲಿ ಕೊಡಗು ಗೌಡ ಸಮಾಜದ ಉಪಾಧ್ಯಕ್ಷ ಸೂರ್ತಲೆ ಆರ್.ಸೋಮಣ್ಣ, ಕಾರ್ಯದರ್ಶಿ ಪೊಳಕಂಡ ಎಂ.ಸಂದೀಪ್, ನಿದೇರ್ಶಕರಾದ ಹುದೇರಿ ರಾಜೇಂದ್ರ, ಕೊಲ್ಯದ ಗಿರೀಶ್, ಪೇರಿಯನ ಜಯಾನಂದ ಇದ್ದರು.