ನೆಲ್ಲಿಹುದಿಕೇರಿ:ಉದ್ಯಾನವನದಲ್ಲಿದ್ದ ಬೃಹತ್ ಮರಗಳ ಮಾರಣ ಹೋಮ:ಪ್ರಕರಣ ದಾಖಲು
ಸಿದ್ದಾಪುರ :- ಸಾರ್ವಜನಿಕ ಸ್ಥಳದಲ್ಲಿದ್ದ ಬೃಹತ್ ಮರಗಳನ್ನು ಕಾನೂನುಬಾಹಿರವಾಗಿ ಕಡಿದು ಸಾಗಾಟ ಮಾಡಿದ ವ್ಯಕ್ತಿಯ ವಿರುದ್ದ ಎಫ್ ಐ ಆರ್ ದಾಖಲಿಸಿಕೊಂಡ ಅರಣ್ಯ ಇಲಾಖೆ. ನೆಲ್ಯಹುದಿಕೇರಿಯ ಕಾವೇರಿಸೇತುವೆ ಬಳಿಯ ಉದ್ಯಾನವನದಲ್ಲಿದ್ದ ಬೃಹತ್ ಮರಗಳನ್ನು ಸ್ಥಳೀಯ ವ್ಯಕ್ತಿಯೋರ್ವ ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಕಡಿದು ಸಾಗಾಟ ಮಾಡಿದ, ಹಿನ್ನೆಲೆಯಲ್ಲಿ ಎಚ್ಚೆತ್ತ ಅರಣ್ಯ ಇಲಾಖೆಯು ಕರ್ನಾಟಕ ಅರಣ್ಯ ಕಾಯ್ದೆಯಡಿಯಲ್ಲಿ ನೆಲ್ಯಹುದಿಕೇರಿ ನಿವಾಸಿ ಲತೀಫ್ ಎಂಬಾತನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.