ಪೊನ್ನಂಪೇಟೆ:ಬಿಜೆಪಿ‌ ಮುಖಂಡ ಚೀರಂಡ ಕಂದ ಸುಬ್ಬಯ್ಯ ಹೃದಯಾಘಾತದಿಂದ ನಿಧನ

ಪೊನ್ನಂಪೇಟೆ:ಬಿಜೆಪಿ‌ ಮುಖಂಡ ಚೀರಂಡ ಕಂದ ಸುಬ್ಬಯ್ಯ ಹೃದಯಾಘಾತದಿಂದ ನಿಧನ

ಪೊನ್ನಂಪೇಟೆ; ಸಮೀಪದ ಮುಗಟಗೇರಿ ಗ್ರಾಮದ ನಿವಾಸಿ, ಬಿಜೆಪಿ ಮುಖಂಡರು, ಪೊನ್ನಂಪೇಟೆ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿದ್ದ ಚೀರಂಡ ಕಂದ ಸುಬ್ಬಯ್ಯ (53) ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ.

 ಮೃತರ ಅಂತಿಮ ಸಂಸ್ಕಾರ ಇಂದು ಮಧ್ಯಾಹ್ನ 3 ಗಂಟೆಗೆ ಅವರ ಸ್ವಹಗ್ರಹದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಹಲವಾರು ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಕಂದ ಸುಬ್ಬಯ್ಯ ನೇರ ನುಡಿ ವ್ಯಕ್ತಿತ್ವ ಉಳ್ಳವರು, ಸಮಾಜದ ಅಂಕುಡೊಂಕುಗಳ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ ಹಲವು ಪತ್ರಿಕೆಗಳಲ್ಲಿ ಲೇಖನಗಳನ್ನು ಕೂಡ ಬರೆಯುತ್ತಿದ್ದರು. ಅಪ್ಪಟ ದೇಶಪ್ರೇಮಿಯಾಗಿದ್ದ ಇವರು ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಜನರ ಪ್ರೀತಿ ಗಳಿಸಿದ್ದರು.