ಮಡಿಕೇರಿಗೆ ಹೋಗಿ ಬರುವುದಾಗಿ ಹೇಳಿದ ಯುವತಿ ನಾಪತ್ತೆ
ಮಡಿಕೇರಿ; ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯ ಕೃಷ್ಣಪ್ಪ ಎಂಬುವವರ ಪುತ್ರಿ ಪಾರ್ವತಿ (15) ಗುರುವಾರ ಮಧ್ಯಾಹ್ನ ಮಡಿಕೇರಿಗೆ ಹೋಗಿಬರುವುದಾಗಿ ಹೇಳಿ ಹೋದವರು ನಂತರ ಮನೆಗೆ ಹಿಂತಿರುಗದೇ ಕಾಣಿಯಾಗಿದ್ದಾಳೆ. ಈ ಕುರಿತು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ. ಆದ್ದರಿಂದ ಈಕೆಯ ಬಗ್ಗೆ ಮಾಹಿತಿ ತಿಳಿದಲ್ಲಿ ಮೊಬೈಲ್ ನಂಬರ್ 9380941921 ಅನ್ನು ಸಂಪರ್ಕಿಸಲು ಕೋರಲಾಗಿದೆ.