ವಿರಾಜಪೇಟೆ ಬಳೆ ವ್ಯಾಪಾರಿ ಯತಿರಾಜ್ ನಿಧನ

ವಿರಾಜಪೇಟೆ ಬಳೆ ವ್ಯಾಪಾರಿ ಯತಿರಾಜ್ ನಿಧನ

ವಿರಾಜಪೇಟೆ: ಮುಖ್ಯ ರಸ್ತೆಯಲ್ಲಿ ಬಳೆ ವ್ಯಾಪಾರ ಮಾಡಿಕೊಂಡಿದ್ದ ಗಾಂಧಿನಗರ ದ ನಿವಾಸಿ ಯತಿರಾಜ್ (53)ಸೋಮವಾರ ನಿಧನರಾದರು. ಇವರ ಅಂತ್ಯಕ್ರಿಯೆ ಇಂದು ಮಂಗಳವಾರ ವಿರಾಜಪೇಟೆಯಲ್ಲಿ ನಡೆಯಲಿದೆ. ಇವರು ವಿರಾಜಪೇಟೆ ಬೀದಿ ಬದಿ ವ್ಯಾಪಾರಿಗಳ ಸಂಘದ ಮಾಜಿ ಅಧ್ಯಕ್ಷರಾಗಿದ್ದರು. ಜಿಲ್ಲಾ ಬಲಜಿಗ ಸಮಾಜದ ಕಾರ್ಯದರ್ಶಿ ಯಾಗಿದ್ದರು,ಮತ್ತು ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಅವರ ಆಪ್ತರಾಗಿದ್ದರು.