ಪೊನ್ನಂಪೇಟೆ:ಕುಂಬಾರಕಟ್ಟೆ, ತಟ್ಟಕೆರೆ, ಗಂಧದಗುಡಿ ಹಾಡಿಗಳ ಯುವಕರಿಗೆ ಕ್ರೀಡಾ ಪರಿಕರಗಳನ್ನು ವಿತರಿಸಿದ ಎ.ಎಸ್ ಪೊನ್ನಣ್ಣ

ಪೊನ್ನಂಪೇಟೆ: ವಿರಾಜಪೇಟೆ ಕ್ಷೇತ್ರದ ಪೊನ್ನಂಪೇಟೆ ಭಾಗದ ಬಾಳೆಲೆ ಗ್ರಾಮದ ಪ್ರವಾಸದಲ್ಲಿದ್ದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ನವರು, ತಮ್ಮ ನಿಗದಿತ ಕಾರ್ಯಕ್ರಮಗಳ ಬಳಿಕ ಬಾಳಲೆಯ ಕುಂಬಾರಕಟ್ಟೆ, ತಟ್ಟಕೆರೆ ಹಾಗು ಗಂಧದ ಗುಡಿ ಹಾಡಿಗಳಿಗೆ ಅನೌಪಚಾರಿಕ ಭೇಟಿ ನೀಡಿ ಅಲ್ಲಿಯ ನಿವಾಸಿಗಳನ್ನು ಆತ್ಮೀಯತೆಯಿಂದ ಮಾತನಾಡಿಸಿದರು. ಶಾಸಕರ ಆಗಮನದಿಂದ ಸಂತೋಷಗೊಂಡ ನಿವಾಸಿಗಳು ಶಾಸಕರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಹಾಡಿಯ ಜನರ ಕಷ್ಟ ಸುಖಗಳನ್ನು ವಿಚಾರಿಸಿದ ಮಾನ್ಯ ಶಾಸಕರು ಬಳಿಕ ಹಾಡಿಯ ಮಕ್ಕಳಿಗಾಗಿ ಆಟವಾಡಲು ವಿವಿಧ ಆಟೋಪಕರಣಗಳನ್ನು ಉದಾರವಾಗಿ ನೀಡಿ ಮಾತನಾಡಿದ ಶಾಸಕರು, ಪ್ರಕೃತಿಯ ಮಡಿಲಿನಲ್ಲೇ ಹುಟ್ಟಿ ಬೆಳೆದ ಈ ಯುವಕರಲ್ಲಿ ಅನೇಕ ಕ್ರೀಡಾ ಪ್ರತಿಭೆಗಳು ಅಡಗಿದ್ದು ಇದು ಸಮಾಜಕ್ಕೆ ಗೊತ್ತಾಗಬೇಕೆಂದರೆ ಈಗಿಂದಲೇ ಅವರು ಆಧುನಿಕ ರೀತಿಯಲ್ಲಿ ಆಟವನ್ನು ಆಡಲು ಕಲಿಯಬೇಕೆಂದು ಸಲಹೆ ನೀಡಿದರು. ತಾನು ನೀಡುವ ಉಪಕರಣಗಳು ಈ ಯುವಕರ ಮುಂದಿನ ಭವಿಷ್ಯಕ್ಕೆ ಸಹಕಾರಿಯಾಗಲಿ ಎಂದು ಹಾರೈಸಿದರು,
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೀದೇರಿರ ನವೀನ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರುಣ್ ಮಾಚಯ್ಯ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಾನಂಡ ಪೃತ್ಯು, ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
What's Your Reaction?






