ಪ್ರಾಮಾಣಿಕತೆ ಮತ್ತು ಕರ್ತವ್ಯದ ಬದ್ಧತೆ ವಿದ್ಯಾರ್ಥಿ ನಾಯಕರ ಪ್ರಮುಖ ಗುಣ : ಕಾಡ್ಯಮಾಡ ಲಲಿತ ಮೊಣ್ಣಪ್ಪ ಸರ್ವದೈವತ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ನಾಯಕರ ಆಯ್ಕೆ ಪ್ರಕ್ರಿಯೆ:

Jun 23, 2025 - 19:22
 0  44
ಪ್ರಾಮಾಣಿಕತೆ ಮತ್ತು ಕರ್ತವ್ಯದ ಬದ್ಧತೆ ವಿದ್ಯಾರ್ಥಿ ನಾಯಕರ ಪ್ರಮುಖ ಗುಣ : ಕಾಡ್ಯಮಾಡ ಲಲಿತ ಮೊಣ್ಣಪ್ಪ  ಸರ್ವದೈವತ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ನಾಯಕರ ಆಯ್ಕೆ ಪ್ರಕ್ರಿಯೆ:

ಗೋಣಿಕೊಪ್ಪಲು:ಪ್ರಾಮಾಣಿಕತೆ ಮತ್ತು ಕರ್ತವ್ಯದ ಬದ್ಧತೆ ವಿದ್ಯಾರ್ಥಿ ನಾಯಕರ ಪ್ರಮುಖ ಗುಣ ಎಂದು ವಿದ್ಯಾಸಂಸ್ಥೆಯ ಹಿರಿಯ ಪ್ರಾಂಶುಪಾಲರಾದ ಕಾಡ್ಯಮಾಡ ಲಲಿತ ಮೊಣ್ಣಪ್ಪ ಅಭಿಪ್ರಾಯಪಟ್ಟರು.ಗೋಣಿಕೊಪ್ಪ ಸಮೀಪದ ಅರ್ವತ್ತೋಕ್ಲುವಿನ ಸರ್ವದೈವತ ವಿದ್ಯಾಸಂಸ್ಥೆಯಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ನಾಯಕರುಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಮಸ್ಯೆ ಎದುರಾದಾಗ ತಾಳ್ಮೆಯಿಂದ ಆಲೋಚಿಸಿ, ಸರಿಯಾದ ನಿರ್ಣಯ ತೆಗೆದುಕೊಳ್ಳಬೇಕು. ಶಿಸ್ತು,ಪ್ರಾಮಾಣಿಕತೆ, ಪರಸ್ಪರ ಗೌರವ, ಸಹಕಾರ ಮತ್ತು ಸೇವಾ ಮನೋಭಾವ, ಪ್ರೇರಣದಾಯಕ ನಡೆ, ಮಾತು ಮತ್ತು ಕೃತಿಯಲ್ಲಿ ಸರಳತೆ ಹಾಗೂ ಹೊಣೆಗಾರಿಕೆಯ ಮನೋಭಾವನೆಯನ್ನು ಹೊಂದಿರುವುದು ನಾಯಕರಾಗುವವರಿಗೆ ಅತ್ಯವಶ್ಯಕ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸರ್ವದೈವತ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಕಾಡ್ಯಮಾಡ ಆದಿತ್ಯ ಅಯ್ಯಪ್ಪ,ವಿದ್ಯಾರ್ಥಿ ನಾಯಕರುಗಳಿಗೆ ಶಾಲೆಯ ನಿಯಮಗಳನ್ನು ಪಾಲಿಸುವುದು ಕೇವಲ ಕರ್ತವ್ಯವಲ್ಲ. ಅದು ಅವರ ನಾಯಕತ್ವದ ಅಡಿಪಾಯ. ನಿಯಮ ಪಾಲನೆಯಿಂದಲೇ ನೈತಿಕತೆ, ಜವಾಬ್ದಾರಿ, ಶಿಸ್ತು ಹಾಗೂ ಪ್ರೇರಣೆಯ ಮಾದರಿಯೆಂದು ಪರಿಗಣಿಸಲ್ಪಡುತ್ತದೆ ಎಂದು ಅವರು ಹೇಳಿದರು.ಮುಖ್ಯ ಶಿಕ್ಷಕಿ ಮನೆಯಪಂಡ ಶೀಲಾಬೋಪಣ್ಣ ವಿದ್ಯಾರ್ಥಿ ನಾಯಕರುಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಸರ್ವದೈವತ ವಿದ್ಯಾಸಂಸ್ಥೆಯ ವಿದ್ಯಾರ್ಥಿ ನಾಯಕಿಯಾಗಿ ದ್ವಿತೀಯ ಪಿ.ಯು.ಸಿ. ಮೇರಿ ಶರೀನ್, ಸಹ ನಾಯಕಿಯರಾಗಿ ತಷ್ಮ ತಂಗಮ್ಮ, ಮತ್ತು ಏಳನೇ ತರಗತಿಯ ಸನಾತನಿ ಆಯ್ಕೆಯಾಗಿದ್ದಾರೆ.ಇದೇ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ವಿವಿಧ ಸಂಘಗಳಿಗೆ ಹಾಗೂ ಶಾಲೆಯ ಸತ್ಯ, ಧರ್ಮ, ಶಾಂತಿ ಮತ್ತು ಪ್ರೇಮ ತಂಡಕ್ಕೆ ನಾಯಕ, ನಾಯಕಿಯರ ಆಯ್ಕೆಯ ಪ್ರಕ್ರಿಯೆ ನಡೆಯಿತು.ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪೊನ್ನಿಮಾಡ ಪ್ರದೀಪ್ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0