ಕರಡಿಗೋಡು: ಕಾಡಾನೆ ದಾಳಿಗೆ ಮೃತಪಟ್ಟ ಬೆಳೆಗಾರ ಕುಕ್ಕುನೂರು ಪುರುಷೋತ್ತಮ ಮೃತಪಟ್ಟ ವ್ಯಕ್ತಿ

ಸಿದ್ದಾಪುರ:ಕಾಡಾನೆ ದಾಳಿಯಿಂದಾಗಿ ಕರಡಿಗೋಡುವಿನಲ್ಲಿ ಕಾಫಿ ಬೆಳಗಾರರಾದ ಕುಕ್ಕನೂರು ಪುರುಷೋತ್ತಮ(72) ಮೃತಪಟ್ಟಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಎಂದಿನಂತೆ ಪುರುಷೋತ್ತಮ ಅವರು ತಮ್ಮ ಕರಡಿಗೋಡಿನ ತೋಟ ವೀಕ್ಷಣೆ ತೆರಳಿದ್ದರು.ಆದರೆ ಸಮಯ ತಡವಾದರು ಕೂಡ ತಂದೆ ಮರಳಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಅವರ ಮಗಳು ಸ್ಥಳೀಯ ಪರಿಚಯಸ್ಥರಿಗೆ ಮಾಹಿತಿ ನೀಡಿ ತೋಟದಲ್ಲೇ ಹುಡುಕಾಟ ನಡೆಸಿದ್ದರು.ಈ ಸಂದರ್ಭ ಪುರುಷೋತ್ತಮ ಅವರು ಮೃತಪಟ್ಟಿರುವ ಘಟನೆ ನಡೆದಿದೆ.
ಆನೆ ದಾಳಿಯಿಂದಾಗಿ ಮೃತಪಟ್ಟ ಕುಕ್ಕನೂರು ಪುರುಷೋತ್ತಮ ಅವರು ಮಡಿಕೇರಿ ತಾಲ್ಲೂಕಿನ ತಹಶೀಲ್ದಾರ್ ಪ್ರವೀಣ್ ಅವರ ಮಾವ ಆಗಿದ್ದಾರೆ.ಕು
ಕ್ಕನೂರು ಪುರುಷೋತ್ತಮ ಅವರು ತಮ್ಮ ಸ್ವಂತ ಗದ್ದೆಯನ್ನು ಸಿದ್ದಾಪುರದ ಸಿಟಿ ಬಾಯ್ಸ್ ತಂಡಕ್ಕೆ ಕೆಸಿಎಲ್ ಪಂದ್ಯಾವಳಿಯನ್ನು ಆಯೋಜಿಸಲು ಮೈದಾನವನ್ನು ನಿರ್ಮಿಸಲು ತಮ್ಮ ಎಕರೆಗಟ್ಟಲೇ ಗದ್ದೆಯನ್ನು ನೀಡಿ ಎಲ್ಲರ ಮನ ಗೆದ್ದಿದ್ದರು.
What's Your Reaction?






