ಕುಂಡ್ಯೋಳಂಡ ಐನ್ ಮನೆಗೆ ಎ.ಎಸ್ ಪೊನ್ನಣ್ಣ ಭೇಟಿ:ಕೊಡಗಿನ ಸಂಸ್ಕೃತಿ, ಕ್ರೀಡೆ ಹಾಗೂ ಇತಿಹಾಸವನ್ನು ಪೋಷಿಸಿ,ಬೆಳೆಸಲು ಎಲ್ಲಾ ರೀತಿಯ ಬೆಂಬಲ

ನಾಪೋಕ್ಲು:ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕಿನ, ಕೊಳಕೇರಿಯ ಕುಂಡ್ಯೋಳಂಡ ಐನ್ ಮನೆಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ನವರು ಭೇಟಿ ನೀಡಿದರು. ಕೊಳಕೇರಿಯ ಕುಂಡ್ಯೋಳಂಡ ಐನ್ ಮನೆಯ ಮುಖ್ಯಸ್ಥರ ಕೋರಿಕೆ ಮೇರೆಗೆ ಇಲ್ಲಿಗೆ ಭೇಟಿ ನೀಡಿದ ಶಾಸಕರು, ಐನ್ ಮನೆಯ ಪ್ರಮುಖರು ಆಯೋಜಿಸಿದ ಔತಣಕೂಟದಲ್ಲಿ ಭಾಗವಹಿಸಿದರು.
ಕಳೆದ ಸಾಲಿನಲ್ಲಿ ಜರುಗಿದ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾಟವು ಅಭೂತಪೂರ್ವ ಯಶಸ್ಸು ಕಂಡಿತ್ತು. ಈ ಯಶಸ್ಸಿನ ಹಿಂದೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ರವರ ಕೊಡುಗೆ ಬಹುದೊಡ್ಡದು. ಕುಂಡ್ಯೋಳಂಡ ಕುಟುಂಬಸ್ಥರ ಕೋರಿಕೆ ಮೇರೆಗೆ ಶಾಸಕರು ಈ ಹಾಕಿ ಪಂದ್ಯಾಟಕ್ಕೆ ವಿಶೇಷ ಅನುದಾನ ಒದಗಿಸುವಲ್ಲಿ ಶ್ರಮವಹಿಸಿದ್ದರು. ಶಾಸಕರ ಈ ಪ್ರಯತ್ನಕ್ಕೆ, ತಮ್ಮ ಕೃತಜ್ಞತೆಯನ್ನು ಸಲ್ಲಿಸಲು ಕುಂಡ್ಯೋಳಂಡ ಕುಟುಂಬಸ್ಥರು ಈ ವಿಶೇಷ ಔತಣಕೂಟವನ್ನು ಏರ್ಪಡಿಸಿದ್ದರು.
ಔತಣಕೂಟದಲ್ಲಿ ಭಾಗವಹಿಸಿ ಕುಂಡ್ಯೋಳಂಡ ಕುಟುಂಬಸ್ಥರ ಆತಿಥ್ಯವನ್ನು ಸ್ವೀಕರಿಸಿ ಮಾತನಾಡಿದ ಶಾಸಕರು, ಕೊಡಗಿನ ಸಂಸ್ಕೃತಿ, ಕ್ರೀಡೆ ಹಾಗೂ ಇತಿಹಾಸವನ್ನು ಪೋಷಿಸಿ ಬೆಳೆಸಲು ತಾನು ಸದಾ ಸಹಕರಿಸುವುದಾಗಿ ಹೇಳಿದರು. ಇ
ದೇ ಸಂದರ್ಭದಲ್ಲಿ ಮಾತನಾಡಿದ ಕುಂಡ್ಯೋಳಂಡ ಕುಟುಂಬದ ಪ್ರಮುಖರು, ಮುಂದಿನ ಸಾಲಿನಲ್ಲಿ ನಡೆಯುವ ಅಜ್ಜಿಕುಟ್ಟಿರ ಹಾಕಿ ಉತ್ಸವದ ಯಶಸ್ಸಿಗೆ ಎಲ್ಲ ಸಹಕಾರ ನೀಡುವುದಾಗಿ ಘೋಷಿಸಿದರು.
ಈ ಔತಣಕೂಟದಲ್ಲಿ ಶಾಸಕರ ಧರ್ಮಪತ್ನಿಯವರಾದ ಶ್ರೀಮತಿ ಕಾಂಚನ್ ಪೊನ್ನಣ್ಣ, ಕುಂಡ್ಯೋಳಂಡ ಕುಟುಂಬದ ಪಟ್ಟೆದಾರರಾದ ಚುಬ್ಬನಿ ಸುಬ್ಬಯ್ಯ, ಲಲಿತಾ ಚಿಣ್ಣಪ್ಪ, ರಮೇಶ್ ಮುದ್ದಯ್ಯ, ದಿನೇಶ್ ಕಾರ್ಯಪ್ಪ,ಕುಂಡ್ಯೋಳಂಡ ಕುಟುಂಬಸ್ಥರು ಹಾಗೂ ಮತ್ತಿತರರು ಭಾಗವಹಿಸಿದರು.
What's Your Reaction?






