ಗೆಜ್ಜೆ ಮನೆ ಕ್ರಿಕೆಟ್:ಶಾಸಕ ಎ.ಎಸ್ ಪೊನ್ನಣ್ಣನಿಗೆ ಸನ್ಮಾನ

ಪೊನ್ನಂಪೇಟೆ :ತಾಲ್ಲೂಕಿನ ತಿತಿಮತಿಯಲ್ಲಿ ಜರುಗುತ್ತಿರುವ, ಜೇನು ಕುರುಬ ಯುವ ಸಮಾಜ ಆಯೋಜಿಸಿದ ಗೆಜ್ಜೆ ಮನೆ ಕ್ರಿಕೆಟ್ ಪಂದ್ಯಾವಳಿಯ ಅತಿಥಿಯಾಗಿ ಶಾಸಕರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದ್ದರು. ಜೇನು ಕುರುಬ ಸಮುದಾಯದ ಯುವಕರ ಪ್ರೀತಿ ಪೂರ್ವಕ ಆಮಂತ್ರಣಕ್ಕೆ ಸ್ಪಂದಿಸಿ ಮೈದಾನಕ್ಕೆ ಆಗಮಿಸಿದ ಮಾನ್ಯ ಶಾಸಕರು, ಕ್ರೀಡಾಕೂಟದಲ್ಲಿ ಭಾಗವಹಿಸಿದ ಯುವಕರ ಆಟಗಾರಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ರಿಕೆಟ್ ತಂಡಗಳಿಗೆ ಶುಭ ಕೋರಿ ಮಾತನಾಡಿದ ಮಾನ್ಯ ಶಾಸಕರು, ಜೇನು ಕುರುಬ ಸಮುದಾಯದಲ್ಲಿ ಇಂತಹ ಅದ್ಭುತ ಆಟಗಾರರು ತಮ್ಮ ಪ್ರತಿಭೆಯನ್ನು ಕ್ರೀಡಾ ಜಗತ್ತಿಗೆ ಪರಿಚಯಿಸಲು ಇದೊಂದು ಉತ್ತಮ ಟೂರ್ನಮೆಂಟ್ ಆಗಿದೆ. ಈ ಸಮುದಾಯದ ಕೆಲವು ಪ್ರತಿಭಾನ್ವಿತ ಯುವಕರಿಗೆ ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯ ಲಭಿಸಲಿದೆ ಎಂದು ಹಾರೈಸಿದರು. ದುಡಿಮೆಯೇ ಜೀವನಕ್ಕೆ ಆಧಾರವಾಗಿರುವ ಜೇನು ಕುರುಬ ಸಮುದಾಯದ ಯುವಕರ ಈ ಕ್ರೀಡಾ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮಾನ್ಯ ಶಾಸಕರು ಮುಂದಿನ ದಿನಗಳಲ್ಲಿಯೂ ಸಹ, ಈ ಸಮುದಾಯದ ಕ್ರೀಡಾ ಪ್ರತಿಭೆಗಳ ಏಳಿಗೆಗೆ ಸಹಾಯ ಮಾಡಲು ತಾನು ಸದಾ ಸಿದ್ಧವಿರುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಜೇನು ಕುರುಬ ಯುವ ಸಮಾಜದ ವತಿಯಿಂದ ಮಾನ್ಯ ಶಾಸಕರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಿತಿಮತಿ ಭಾಗದ ಕಾಂಗ್ರೆಸ್ ಮುಖಂಡರು ಹಾಗೂ ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು.
What's Your Reaction?






