ಗೋಪಾಲಪುರದ ಸಂತ ಅಂತೋಣಿ ಚರ್ಚ್ ನಲ್ಲಿ ಗುಡ್ ಫ್ರೈಡೆ ಆಚರಣೆ
ಸೋಮವಾರಪೇಟೆ; ತಾಲೂಕಿನ ಗೋಪಾಲಪುರದ ಸಂತ ಅಂತೋಣಿ ಚರ್ಚ್ ಫಾದರ್ ಫಾದರ್ ಕ್ರಿಸ್ಟೋಫರ್ ಸಗಾಯರಾಜ್ ಅವರಿಂದ ಶುಭ ಶುಕ್ರವಾರದಂದು ಶಿಲುಬೆ ಬೆಟ್ಟದಲ್ಲಿ ಪ್ರಾರ್ಥನೆಯನ್ನು ಪ್ರಾರಂಭಿಸಿ ಪ್ರತಿ ಒಂದೊಂದು ಶಿಲುಬೆಯಲ್ಲಿ ದೇವರು ಅನುಭವಿಸಿದ ಕಷ್ಟಗಳನ್ನು ಕುರಿತು ಪ್ರಾರ್ಥನೆ ಸಲ್ಲಿಸುತ್ತಾ ಹಾಗೂ ದೇಶಕ್ಕಾಗಿ ಮತ್ತು ಕರ್ನಾಟಕಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.
ಪ್ರತಿಯೊಂದು ಜನರಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಿ ದೇವರ ಸ್ಮರಣೆಯನ್ನು ಮಾಡುತ್ತ ಶಿಲುಬೆ ಪ್ರಾರ್ಥನೆಯನ್ನು ಮುಗಿಸಿ ತದನಂತರ ಚರ್ಚ ನಲ್ಲಿ ಶಿಲುಬೆಗೆ ಸನ್ಮಾನಿಸಿ ಹಾಗೂ ಜನರೆಲ್ಲರೂ ಶಿಲುಬೆಗೆ ಸನ್ಮಾನಿಸಿದರು.ಹಾಗೂ ಆರಾಧನಾ ವಿಧಿಗಳಲ್ಲಿ ಭಾಗವಹಿಸಿದ್ದರು . ಈ ಸಂದರ್ಭದಲ್ಲಿ ಚರ್ಚ್ ಫಾದರ್ ಕ್ರಿಸ್ಟೋಫರ್ ಸಗಾಯರಾಜ್ ಹಾಗೂ ಸಿಸ್ಟರ್ ಲೂಸಿ ಹಾಗೂ ಸಲಹಾ ಸಮಿತಿಗಳ ಸದಸ್ಯರುಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
