ಕೇರಳ ವಿಧಾನಸಭಾ ಚುನಾವಣೆ;ಇರಿಕ್ಕೂರ್ ಭಾಗದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ
ಕೇರಳ; ವಿಧಾನಸಭೆ ಚುನಾವಣಾ ಪ್ರಯುಕ್ತ, ಎಐಸಿಸಿ ನಿಯೋಜಿತ ವೀಕ್ಷಕರಾದ, ವಿರಾಜಪೇಟೆ ಶಾಸಕರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು, ಇರಿಕ್ಕೂರ್ ಭಾಗದಲ್ಲಿ ಆಯೋಜಿಸಿದ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಜೀವ್ ಜೋಸೆಫ್ ಪರ ಮತಯಾಚಿಸಲಾಯಿತು.