ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಕೊಡಗು ರೈತ ಸಂಘ
ಬೆಂಗಳೂರು; ಕೊಡಗು ರೈತಸಂಘದಿಂದ ಕಾಡ್ಯಮಾಡ ಮನು ಸೋಮಯ್ಯನವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಇಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿ ಮಾಡಿ, ಹಲವು ಮಹತ್ವದ ವಿಚಾರಗಳ ಚರ್ಚೆ ನಡೆಸಿ,ಮನವಿ ಪತ್ರ ಸಲ್ಲಿಸಿದರು. ಕಾಡ್ಯಮಾಡ ಮನು ಸೋಮಯ್ಯನವರೊಂದಿಗೆ ಜಿಲ್ಲಾ,ತಾಲೂಕು ಹಾಗೂ ಹೋಬಳಿ ಪದಾಧಿಕಾರಿಗಳು ರೈತಮುಖಂಡರು ಭಾಗವಹಿಸಿದ್ದರು.