ಕೊಡಗು ಪತ್ರಕತ೯ರ ಸಂಘ - ಮುಳಿಯ ಸಂಸ್ಥೆಯಿಂದ ಆಯೋಜಿತ ಗೀತಗಾಯನ ; ಮಡಿಕೇರಿಯಲ್ಲಿ ಕನ್ನಡ ಗೀತೆಗಳ ಕಂಪು ಬೀರಿದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

Nov 24, 2025 - 17:33
 0  388
ಕೊಡಗು ಪತ್ರಕತ೯ರ ಸಂಘ - ಮುಳಿಯ ಸಂಸ್ಥೆಯಿಂದ ಆಯೋಜಿತ ಗೀತಗಾಯನ ; ಮಡಿಕೇರಿಯಲ್ಲಿ ಕನ್ನಡ ಗೀತೆಗಳ ಕಂಪು ಬೀರಿದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ಮಡಿಕೇರಿ ನ.24 - ಕಿಕ್ಕಿರಿದು ಸೇರಿದ್ದ ಕಲಾಪ್ರೇಮಿಗಳ ಸಮ್ಮುಖದಲ್ಲಿ ಕನ್ನಡದ ಅಪೂವ೯ ಗೀತೆಗಳ ಮಾಧುಯ೯ ಅನಾವರಣಗೊಳ್ಳುತ್ತಿರುವಂತೆಯೇ ಕೇಳುಗರು ಚಪ್ಪಾಳೆ ತಟ್ಟಿ, ತಲೆದೂಗಿ ಕನ್ನಡದ ಗೀತೆಗಳ ಸಾಹಿತ್ಯ, ಸಂಗೀತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾಲ್ಕು ಗಂಟೆಗಳ ಕಾಲ ಮಧುರವಾದ ಗೀತೆಗಳು ಸಭಾಂಗಣದಲ್ಲಿ ಮಾಧ೯ನಿಸಿದವು.

ನಗರದ ರೆಡ್ ಬ್ರಿಕ್ಸ್ ನ ಸತ್ಕಾರ್ ಸಭಾಂಗಣದಲ್ಲಿ ಕೊಡಗು ಪತ್ರಕತ೯ರ ಸಂಘ ಮತ್ತು ಮುಳಿಯ ಚಿನ್ನಾಭರಣಗಳ ಸಂಸ್ಥೆ ವತಿಯಿಂದ ಆಯೋಜಿತ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತಗಾಯನ ಕಾಯ೯ಕ್ರಮದಲ್ಲಿ ಜಿಲ್ಲೆಯಾದ್ಯಂತಲಿನ 53 ಕಲಾವಿದರ 33 ಹಾಡುಗಳು ಕಲಾಪ್ರೇಮಿಗಳ ಮನಸೂರೆಗೊಂಡವು.

ಕಾಯ೯ಕ್ರಮದಲ್ಲಿ ಕಲಾವಿದರಿಗೆ ಗೌರವಾಪ೯ಣೆ ನೆರವೇರಿಸಿ ಮಾತನಾಡಿದ ಮುಳಿಯ ಚಿನ್ನಾಭರಣ ಸಂಸ್ಥೆಯ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಭಾರತದಲ್ಲಿರುವವರೆಲ್ಲರೂ ಹೇಗೆ ಭಾರತೀಯರೋ ಹಾಗೇ ಕನಾ೯ಟಕದಲ್ಲಿರುವವರೆಲ್ಲರೂ ಕನ್ನಡಿಗರೇ ಆಗಿದ್ದಾರೆ. ಬೆಂಗಳೂರಿನಂಥ ರಾಜಧಾನಿಯಲ್ಲಿ ಕನ್ನಡ ಉಳಿಸಿ ಎಂಬ ಕೂಗು ಹೆಚ್ಚಾಗುತ್ತಿರುವಾಗ ಮಡಿಕೇರಿಯಂಥ ಪುಟ್ಟ ನಗರಗಳಲ್ಲಿ ಕನ್ನಡದ ಮಹತ್ವ ಸಾರುವ ಕಾಯ೯ಕ್ರಮಗಳಿಗೆ ಅತ್ಯಧಿಕ ಕನ್ನಡ ಪ್ರೇಮಿಗಳು ಸೇರಿರುವುದು ಹೆಮ್ಮೆ ತಂದಿದೆ ಎಂದರು.

ಕೊಡಗಿನ ಹವಾಗುಣ ಹಾಡುಗಾರರಿಗೆ ಕಷ್ಟಸಾಧ್ಯವಾಗಿದ್ದರೂ ಇಲ್ಲಿ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿರುವುದು ಶ್ಲಾಘನೀಯ ಎಂದರು. ಕನ್ನಡದ ಹಾಡುಗಳಿಗೆ ಉತ್ತಮ ಸಾಹಿತ್ಯ ಮುಖ್ಯ. ಹೀಗಿರುವಾಗ ಕನ್ನಡದ ಹಳೇ, ಅಪೂವ೯ ಹಾಡುಗಳನ್ನು ಗೀತಗಾಯನದ ಮೂಲಕ ಪ್ರಸ್ತುತಪಡಿಸಿರುವುದು ಹೆಮ್ಮೆಯ ವಿಚಾರ ಎಂದು ಶ್ಲಾಘಿಸಿದರು.

 ಕಾಯ೯ಕ್ರಮದಲ್ಲಿ ಮಾತನಾಡಿದ ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಬಹುತೇಕರು ಬಾಲ್ಯದಿಂದಲೇ ಕೇಳಿ ಬೆಳೆದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆಯನ್ನು ಹುಯಿಲಗೋಳ ನಾರಾಯಣವ್ ರಚಿಸಿ 100 ವಷ೯ಗಳು ಸಂಪೂಣ೯ವಾದ ಹಿನ್ನಲೆಯಲ್ಲಿ ಈ ಗೀತೆಯ ಮಹತ್ವವನ್ನು ಸ್ಮರಿಸಿಕೊಳ್ಳಲು ಈ ಗೀತಗಾಯನ ಆಯೋಜಿಸಲಾಗಿದೆ ಎಂದರು.

ಪ್ರಾಯೋಗಿಕ ಹಂತವಾಗಿ ಜಿಲ್ಲೆಯಾದ್ಯಂತಲಿನ 53 ಕಲಾವಿದರನ್ನು ಆಯ್ಕೆ ಮಾಡಿಕೊಳ್ಲಲಾಗಿದ್ದು ಭವಿಷ್ಯದಲ್ಲಿ ಮತ್ತಷ್ಟು ಕಲಾವಿದರಿಂದ ಇಂಥ ಕಾಯ೯ಕ್ರಮ ಆಯೋಜಿಸಲಾಗುತ್ತದೆ ಎಂದೂ ಅನಿಲ್ ಹೇಳಿದರು. ಸ್ವಾಸ್ಥ್ಯ, ಸದೖಡ, ಸುಂದರ ಸಮಾಜ ನಿಮಾ೯ಣ ಪರಿಕಲ್ಪನೆಯೊಂದಿಗೆ ಕೊಡಗು ಪತ್ರಕತ೯ರ ಸಂಘವು ವೈವಿಧ್ಯಮಯ ಕಾಯ೯ಕ್ರಮಗಳ ಮೂಲಕ ಸಾಮಾಜಿಕವಾದ ಹೊಣೆಗಾರಿಕೆಯನ್ನು ಹೊಂದಿದೆ ಎಂದೂ ಅನಿಲ್ ಹೇಳಿದರು.

 ಹಿರಿಯ ಕಲಾವಿದ ಜಿ.ಚಿದ್ವಿಲಾಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹದ ಕೊರತೆ ಇದೆ ಎನ್ನುವುದನ್ನು ಈ ಕಾರ್ಯಕ್ರಮ ಸುಳ್ಳು ಮಾಡಿದೆ ಎಂದು ಹೇಳಿದರು. ಗೀತ ಗಾಯನ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತದಿoದ ಬಂದ ಹಲ ಸಂಖ್ಯೆಯ ಕನ್ನಡಾಭಿಮಾನಿಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಕದ್ರಿ ಗೋಪಾಲಕೃಷ್ಣ ಅವರಿರಬಹುದು, ಪ್ರಖ್ಯಾತ ಕೊಳಲು ವಾದಕ ಗೋಡ್ಕಿಂಡಿ ಸೇರಿದಂತೆ ಹಲವರು ಕಾರ್ಯಕ್ರಮಗಳನ್ನು ನೀಡಿದ್ದಾರೆ.

 ಇಂತಹ ಎಲ್ಲಾ ಸಂದರ್ಭಗಳಲ್ಲಿ ಕಾಣಿಸಿಕೊಂಡದ್ದು ಕಲಾಭಿಮಾನಿಗಳ ಕೊರತೆ. ಅಂತಹ ಕೊರತೆಯನ್ನು ಇಂದಿನ ಕಾರ್ಯಕ್ರಮ ತುಂಬಿಕೊಟ್ಟಿದೆಯೆಂದು ಚಿದ್ವಿಲಾಸ್ ಮನದಾಳದಿಂದ ನುಡಿದರು. ಇಂದಿನ ಗೀತ ಗಾಯನ ಕಾರ್ಯಕ್ರಮವನ್ನು ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಅವರು ಆಯೋಜಿಸುವ ಮೂಲಕ, ಹಾಡುಗಾರರಲ್ಲದವರು ಕನ್ನಡಾಭಿಮಾನ ಮತ್ತು ಪ್ರೀತಿಯಿಂದ ಒಂದು ಒಳ್ಳೆಯ ಕಾರ್ಯಕ್ರಮವನ್ನು ಆಯೋಜಿಸಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆಂದು ಅವರು ಸಂತಸ ವ್ಯಕ್ತಪಡಿಸಿದರು.

ಮುಳಿಯ ಜ್ಯುವೆಲ್ಲರಿ ಸಂಸ್ಥೆಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರು ತಮ್ಮ ಉದ್ಯಮವನ್ನು ಮೀರಿ, ಈ ನೆಲದ ಭಾಷಾ ಸಂಸ್ಕೃತಿ, ಧಾರ್ಮಿಕತೆಗಳ ಬಗ್ಗೆ ಒತ್ತು ನೀಡಿ ಸದಭಿರುಚಿಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಬಗ್ಗೆ ಚಿದ್ವಿಲಾಸ್ ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಡಗು ಪತ್ರಕತ೯ರ ಸಂಘದ ಪ್ರಧಾನ ಕಾಯ೯ದಶಿ೯ ಸುರೇಶ್ ಬಿಳಿಗೇರಿ ವಂದಿಸಿದ ಕಾಯ೯ಕ್ರಮವನ್ನು ಸಂಘದ ನಿದೇ೯ಶಕ ರಂಜಿತ್ ಕವಲಪಾರ ಹಾಗೂ ಗಾಯತ್ರಿ ಚೆರಿಯಮನೆ ನಿರೂಪಿಸಿದರು.

ಸಂಘದ ಸಲಹೆಗಾರರಾದ ಟಿ.ಪಿ. ರಮೇಶ್, ಬಿ.ಜಿ. ಅನಂತಶಯನ, ಖಜಾಂಚಿ ಟಿ.ಕೆ.ಸಂತೋಷ್, ಕ್ಷೇಮಾಭಿವೖದ್ದಿ ಸಮಿತಿ ಅಧ್ಯಕ್ಷ ಜಿ.ವಿ. ರವಿಕುಮಾರ್, ಕುಶಾಲನಗರ ತಾಲೂಕು ಸಂಘದ ಅಧ್ಯಕ್ಷ ವಿಘ್ನೇಷ್ ಭೂತನಕಾಡು, ವಿರಾಜಪೇಟೆ ತಾಲೂಕು ಸಂಘದ ಅಧ್ಯಕ್ಷ ಮುದೋಷ್ ಪೂವಯ್ಯ , ನಿದೇ೯ಶಕರು ಹಾಜರಿದ್ದರು. ವಿವಿಧ ಸಂಘಸಂಸ್ಥೆಗಳ ಪ್ರಮುಖರು ಗೀತಗಾಯನ ಸಾಕ್ಷೀಕರಿಸಿದರು.

 ಮನಸೆಳೆದ ಕಲಾವಿದರು. ...

ಮೇಘಾ ಭಟ್ ನಿರ್ದೇಶನದಲ್ಲಿ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ಶಿಕ್ಷಕಿಯರ ತಂಡದಿಂದ ಪ್ರಾರಂಭಿಕ ಗೀತೆಯಾಗಿ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಮೂಡಿಬಂದಾಗ ಕಲಾಪ್ರೇಮಿಗಳು ಎದ್ದು ನಿಂತು ಶತಮಾನದ ಹಾಡಿಗೆ ಗೌರವ ಸೂಚಿಸಿದರು. ವೇದಿಕೆಯಲ್ಲಿ ಹೆಸರಾಂತ ಕಲಾವಿದ ಬಿ.ಆರ್.ಸತೀಶ್ ಅವರು ಭುವನೇಶ್ವರಿಯ ಚಿತ್ರ ಬಿಡಿಸುವ ಮೂಲಕ ಮೆರುಗು ಹೆಚ್ಚಿಸಿದರು.

ಕೊಡಗು ಪೊಲೀಸ್ ಸಾಂಸ್ಕೖತಿಕ ವೇದಿಕೆಯ ಚಂದ್ರಶೇಖರ್ ಎಸ್.ವಿ ( ಎಲ್ಲಾದರು ಇರು ಎಂತಾದರು ಇರು) , ಕೆ.ಎಸ್. ಧನಂಜಯ (ಕಾಣದ ಕಡಲಿಗೆ ಹಂಬಲಿಸಿದೆ ಮನ),ಬಸವರಾಜು ( ನಾವಾಡುವ ನುಡಿಯೇ ಕನ್ನಡ ನುಡಿ.) ಮಲ್ಲಪ್ಪ ಮುಸಿಗಿರಿ ( ಜೇನಿನ ಹೊಳೆಯೋ.. ಹಾಲಿನ . ಮಳೆಯೋ) , ಎಸ್. ಮಂಜುನಾಥ್. (ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು), ಪೊನ್ನಂಪೇಟೆಯ ಶೋಭಾ ಶ್ರೀನಿವಾಸ್ ( ಕೇಳಿಸದೇ ಕಲ್ಲು ಕಲ್ಲಿನಲಿ),, ಎಚ್.ಎಸ್. ಸುಧೀರ್ (ಕರುನಾಡ ತಾಯೆ ಸದಾ ಚಿನ್ಮಯಿ ) ವೀರಾಜಪೇಟೆಯ ಮೋಹನ್ ಟಿ.ಡಿ. ಮತ್ತು ಸುಪ್ರಿತಾ ದಿಲೀಪ್ ( ನೀ ಮೀಟಿದ ನೆನಪೆಲ್ಲವು) ಕೖಷ್ಣವೇಣಿ ಮುಳಿಯ ( ಇನ್ನಷ್ಟು ಬೇಕೆನಗೆ ರಾಮ), ಮಡಿಕೇರಿಯ ಮೆಹೆಖ್ ಫಾತಿಮ ( ಇನ್ನೂ ಯಾಕ ಬರಲಿಲ್ಲ.. ಹುಬ್ಬಳ್ಳಿಯಂವ), ಸೋಮವಾರಪೇಟೆಯ ಜನಾಧ೯ನ್ ( ಕಣಕಣ ದೇ ಶಾರದೆ), ಮಡಿಕೇರಿಯ ಜಿ.ಎನ್. ಶ್ರೀಹರಿ ರಾವ್ ( ಭಲೆ ಭಲೇ ಚೆಂದದ ಚೆಂದುಳ್ಳಿ) ಸೋಮವಾರಪೇಟೆಯ ಎಸ್.ಎ.ಮುರಳೀಧರ್ ( ಬಂಗಾರ ನೀರ ಕಡಲಾಚೆಗಿದೆ) ಮಡಿಕೇರಿಯ ಸಂಧ್ಯಾ ಚಿದ್ವಿಲಾಸ್, ಅಲೆಮಾಡ ಚಿತ್ರಾ ನಂಜಪ್ಪ, ವಂದನಾ ಪೊನ್ನಪ್ಪ ( ಹೂವು ಹೊರಳುವುದು ಸೂಯ೯ನ ಕಡೆಗೆ), ಯುವಗಾಯಕಿ ಮಡಿಕೇರಿಯ ಸಪ್ನಾ ಮಧುಕರ್ ( ನಗು ಎಂದಿದೆ.. ಹೂವಿನ ಬಿಂದು), ವೀರಾಜಪೇಟೆಯ ಅಜಿತ್ ಪೂವಣ್ಣ ( ಹಾಡೊಂದು ನಾ ಹಾಡುವೆನು), ಜನ್ರರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ವಿದ್ಯಾಥಿ೯ ತಂಡ (ಮಣ್ಣಲ್ಲಿ ಬಿದ್ದೋನು..), ಮಡಿಕೇರಿಯ ಮಲಿಹಾ ಫಾತಿಮ ( ರೆಂಬೆ ಕೊಂಬೆ ಮೇಲೆ..), ಮಡಿಕೇರಿಯ ಜಿ. ಚಿದ್ವಿಲಾಸ್ ( ಕೋಡಗನ ಕೋಳಿ ನುಂಗಿತ್ತಾ.), ಕುಶಾಲನಗರದ ಲೋಕೇಶ್ ಸಾಗರ್ ( ಇದೇ ನಾಡು.. ಇದೇ ಭಾಷೆ), ವೀರಾಜಪೇಟೆಯ ಸುಪ್ರೀತಾ ದಿಲೀಪ್ ( ಹೂವಿನ ಬಾಣದಂತೆ ಮೂಲಹಾಡು) ಮಡಿಕೇರಿಯ ಶೖತಿ ಲಯ ತಂಡ (ತೇರ ಏರಿ ಅಂಬರದಾಗೆ), ಬಾಳೆಲೆಯ ಅನ್ವಿತ್ ಕುಮಾರ್ ಸಿ.ವಿ. ( ಬೊಂಬೆ ಹೇಳುತೈತೆ..), ಸಮಥ೯ ಕನ್ನಡಿಗರು ಸಂಸ್ಥೆ ( ಕೂಡಿ ಬಾಳೋಣ.. ಎಂದೆಂದೂ ಸೇರಿ ದುಡಿಯೋಣ), ಸೋಮವಾರಪೇಟೆಯ ಥೆರೇಸಾ ( ನಗಿಸಲು ನೀನು.. ನಗುವೆನು ನಾನು.), ಮಡಿಕೇರಿಯ . ರವಿ ಪಿ.ಮತ್ತು ಮಮತಾ ( ನಿಮ್ ಕಡೆ ಸಾಂಬಾರಂದ್ರೆ ), ಕೊಡಗು ಪೊಲೀಸ್ ಸಾಂಸ್ಕೖತಿಕ ವೇದಿಕೆ ಯಿಂದ ಸಮೂಹ ಗೀತೆ - ಜೋಗದ ಸಿರಿ ಬೆಳಕಿನಲಿ, ತಿತಿಮತಿಯ ಯುವಗಾಯಕಿ ಪಿ. ಹೇಮಾ ( ಕೃಷ್ಣ ನೀ ಬೇಗನೆ ಬಾರೋ..), ಮಡಿಕೇರಿಯ ಟಿ. ಕೆ. ಸುಧೀರ್ ( ಎಲ್ಲಿರುವೆ ಮನವ ಕಾಡುವ ರೂಪಸಿಯೇ.) ಸೋಮವಾರಪೇಟೆಯ ಪುರುಷೋತ್ತಮ್, ( ಒಳಿತು ಮಾಡು ಮನುಷ್ಯ ), ಶಮಿ೯ಳಾ ರಮೇಶ್ ಸೋಮವಾರಪೇಟೆ (ನೀನಿಲ್ಲದೆ ನನಗೇನಿದ), ಮಡಿಕೇರಿಯ ಟಿ.ಜೆ. ಪ್ರವೀಣ್ ಕುಮಾರ್, ( ಚೆಲ್ಲಿದರು ಮಲ್ಲಿಗೆಯ) ಗಾಯತ್ರಿ ಚೆರಿಯಮನೆ ( ಆಕಾಶದಾಗೆ ಯಾರೋ ಮಾಯಗಾರನು.) ಹಾಡುಗಳು ಮನಸೆಳೆದವು.

ಗೀತಗಾಯನ ಕಾಯ೯ಕ್ರಮಕ್ಕೆ ಕಲಾಪ್ರೇಮಿಗಳ ಸ್ಪಂದನ ಉತ್ತಮವಾಗಿತ್ತು, ಸಭಾಂಗಣ ಕಿಕ್ಕಿರಿಯುವಂತೆ ಸಭಿಕರು ಹಾಜರಿದ್ದು ಹಾಡುಗಳಿಗೆ ಚಪ್ಪಾಳೆ, ಶಿಳ್ಳೆ ಮೂಲಕ ಮೆಚ್ಚುಗೆ ಸೂಚಿಸಿ ಇಂಥ ಕಾಯ೯ಕ್ರಮಗಳ ಅಗತ್ಯತೆಯನ್ನು ನಿರೂಪಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0