ಕುಶಾಲನಗರ:ವಿದ್ಯುತ್ ತಗುಲಿ ಹಸು ಸಾವು

Jun 28, 2025 - 12:06
Jun 28, 2025 - 12:41
 0  339
ಕುಶಾಲನಗರ:ವಿದ್ಯುತ್ ತಗುಲಿ ಹಸು ಸಾವು

ಕುಶಾಲನಗರ:ರಾಧಾಕೃಷ್ಣ ಬಡಾವಣೆಯ ಓಂ ಶಾಂತಿ ಆಶ್ರಮದ ಉದ್ಯಾನದ ಬಳಿ ವಿದ್ಯುತ್ ತಗುಲಿ ಮೇಯುತ್ತಿದ್ದ ಹಸು ಸ್ಥಳದಲ್ಲಿ ಸಾವನ್ನಪ್ಪಿದೆ.

ವಿದ್ಯುತ್ ಸಂಪರ್ಕದ ಟಿಸಿ ಇರುವ ಜೋಡಿ ಕಂಭದ ಬಳಿ ನೆಲದಲ್ಲಿ ಅಳವಡಿಸಿರುವ ಕೇಬಲ್ ತುಂಡರಿಸಿ ಹಸುವಿನ ಕಾಲಿಗೆ ವಿದ್ಯುತ್ ಪ್ರವಹಿಸಿರುವ ಶಂಕೆ ಇದೆ.ಹೆಚ್ಚಿನ ಮಕ್ಕಳು ಆಟವಾಡುವ ಸ್ಥಳ ಇದಾಗಿದ್ದು, ಶಾಲೆಗಳಿಗೆ ರಜೆ ಬೇರೆ ಇರುವುದರಿಂದ ಮಕ್ಕಳು ಇಲ್ಲಿ ಆಟವಾಡುವ ಸಂಭವ ವಿದ್ದು ಅದೃಷ್ಟವಶಾತ್ ಹೆಚ್ಚಿನ ಅಪಾಯ ತಪ್ಪಿದೆ.ಸ್ಥಳಕ್ಕೆ ಚೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಸ್ಥಳದಲ್ಲಿ ವಿದ್ಯುತ್ ಅವಘಡದ ಅಪಾಯದ ಬಗ್ಗೆ ಈ ಹಿಂದೆಯೇ ಸ್ಥಳೀಯ ನಿವಾಸಿಗಳಾದ ರಂಗೇಗೌಡ ಹಾಗು ಪುರಸಭೆ ಮಾಜಿ ಸದಸ್ಯ ಮಧುಸೂದನ್ ಇಲಾಖೆಯ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಧಾವಿಸಿದ ಹಸು ವಾರಸುದಾರ ಮುಳ್ಳುಸೋಗೆಯ ಎಂ.ಎಸ್.ಪ್ರಸನ್ನ ( ರಾಜೇಶ್ ಸೋದರ ) ಮುದ್ದು ಹಸುವಿನ ಧಾರುಣ ಸಾವು ಕಂಡು ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತುನಿತ್ಯವೂ ಹತ್ತಾರು ಲೀ.ಹಾಲು ಕೊಡುತ್ತಿತ್ತು ಎನ್ನಲಾಗುತ್ತಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 2
Wow Wow 0