ಮಾನಂದವಾಡಿ ವಿಧಾನಸಭಾ ಕ್ಷೇತ್ರದ UDF ಅಭ್ಯರ್ಥಿಯ ಪರವಾಗಿ ಶಾಸಕ‌ ಎಎಸ್ ಪೊನ್ನಣ್ಣ ‌ಬಿರುಸಿನ‌ ಪ್ರಚಾರ

Mar 28, 2026 - 14:18
Mar 28, 2026 - 21:44
 0  443
ಮಾನಂದವಾಡಿ ವಿಧಾನಸಭಾ ಕ್ಷೇತ್ರದ UDF ಅಭ್ಯರ್ಥಿಯ ಪರವಾಗಿ ಶಾಸಕ‌ ಎಎಸ್ ಪೊನ್ನಣ್ಣ ‌ಬಿರುಸಿನ‌ ಪ್ರಚಾರ

ವಯನಾಡು;ಜಿಲ್ಲೆಯ ಮಾನಂದವಾಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಪರವಾಗಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಇಂದು ತಿರುನೆಲ್ಲಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡರು.

ಈ ಸಂದರ್ಭದಲ್ಲಿ ತಿರುನೆಲ್ಲಿ ಭಾಗದ ಪ್ರಸಿದ್ಧ ಶ್ರೀ ತಿರುನಲ್ಲಿ ಪೆಮ್ಮಯ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಅಭ್ಯರ್ಥಿಯ ಗೆಲುವಿಗಾಗಿ ಪ್ರಾರ್ಥಿಸಿದರು. ಶಾಸಕರೊಂದಿಗೆ, ಮಾನಂದವಾಡಿ ಕ್ಷೇತ್ರದ ಅಭ್ಯರ್ಥಿ ಉಷಾ ವಿಜಯನ್, ಕೊಡಗಿನ ಪ್ರಮುಖರಾದ ಅಜ್ಜಿಕುಟ್ಟಿರ ಪೊನ್ನು, ಕುಂಡಚ್ಚಿರ ಮಂಜು ದೇವಯ್ಯ, ರಾಜನ್, ಶಾಸಕರ ಸಹಾಯಕರಾದ ಕುಮಾರ್ ಮಂಡ್ಯ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 1
Love Love 0
Funny Funny 0
Angry Angry 0
Sad Sad 0
Wow Wow 0