ಕೊಡಗು ಜಿಲ್ಲೆಯ ಎಲ್ಲಾ ಆಟೋ ರಿಕ್ಷಾಗಳಿಗೆ ಜಿಲ್ಲಾ ಪರವಾನಿಗೆ ನೀಡಲು ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದ ಶಾಸಕ ಎಎಸ್ ಪೊನ್ನಣ್ಣ

ಕೊಡಗು ಜಿಲ್ಲೆಯ ಎಲ್ಲಾ ಆಟೋ ರಿಕ್ಷಾಗಳಿಗೆ ಜಿಲ್ಲಾ ಪರವಾನಿಗೆ ನೀಡಲು ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದ ಶಾಸಕ ಎಎಸ್ ಪೊನ್ನಣ್ಣ

ಬೆಂಗಳೂರು: ವಿರಾಜಪೇಟೆ ಕ್ಷೇತ್ರದ ಸಾರಿಗೆ ಸಮಸ್ಯೆಗಳು ಹಾಗೂ ಕೊಡಗು ಜಿಲ್ಲಾ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ಸಮಸ್ಯೆಗಳ ಕುರಿತು ಶಾಸಕ ಎಎಸ್ ಪೊನ್ನಣ್ಣ ಅವರು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಕೊಡಗಿನಲ್ಲಿ ಚಲಿಸುವ ಎಲ್ಲಾ ಆಟೋರಿಕ್ಷಾ ಗಳಿಗೆ ಜಿಲ್ಲಾ ಪರವಾನಿಗೆ ಅನುಮತಿ ನೀಡಬೇಕು. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಹಾಗೂ ಪೊನ್ನಂಪೇಟೆ ವಾಹನ ತಪಾಸಣೆ ಕ್ಯಾಂಪ್ ತೆರೆಯಲು ಹಾಗೂ ವಿರಾಜಪೇಟೆಯಲ್ಲಿ ಡಿಪೋ ಆರಂಭಿಸಲು ಮನವಿ ಸಲ್ಲಿಸಿದರು. ಈ ಬಗ್ಗೆ ಮಾನ್ಯ ಸಚಿವರು ಕೂಡಲೇ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಆಟೋ ಮಾಲೀಕರ ಮತ್ತು ಚಾಲಕರ ಸಂಘ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.