ಮಡಿಕೇರಿ; ಬ್ಯಾರಿ ಸಾಹಿತ್ಯ ಸಮ್ಮೇಳನ ಪೂರ್ವ ಭಾವಿ ಸಭೆ

ಮಡಿಕೇರಿ; ಬ್ಯಾರಿ ಸಾಹಿತ್ಯ ಸಮ್ಮೇಳನ ಪೂರ್ವ ಭಾವಿ ಸಭೆ

ಮಡಿಕೇರಿ; ಬ್ಯಾರಿ ಅಕಾಡಮಿ ಯಾವುದೇ ವ್ಯಕ್ತಿ ,ಸಂಘಟನೆ ಅಥವಾ ಒಂದು ಸಂಸ್ಥೆಗೆ ಸೀಮಿತ ಅಲ್ಲ ಬದಲಾಗಿ ಬ್ಯಾರಿ ಭಾಷೆ , ಕಲೆ ಸಂಸ್ಕ್ರತಿಯನ್ನು ಬಿಂಬಿಸುವ ವೇದಿಕೆಯಾಗಿದೆ. ಸಾಹಿತ್ಯ ,ಸಾಮಾಜಿಕ , ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಿ ಕೊಂಡವರನ್ನು ಸಮ್ಮೇಳನದಲ್ಲಿ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ, ಸಮ್ಮೇಳನದ ಭಾಗವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಈ ನಿಟ್ಟಿನಲ್ಲಿ ಬ್ಯಾರಿ ಸಮುದಾಯದ ಅಭಿವೃಧ್ದಿಗಾಗಿ ಎಲ್ಲರೂ ಸಹಕರಿಸಬೇಕೆಂದು ಕರೆ ನೀಡಿದರು.

ಹಿರಿಯ ಸಾಹಿತಿ ಬಿ.ಎ ಶಂಷುದ್ದೀನ್ ಏಪ್ರಿಲ್ 28 ರಂದು ಮಡಿಕೇರಿಯಲ್ಲಿ ಕರ್ನಾಟಕ ಬ್ಯಾರಿ ಅಕಾಡಮಿ ಹಾಗೂ ಕೊಡಗು ವೆಲ್ಫೇರ್ ಟ್ರಸ್ಟ್ ವತಿಯಿಂದ ನಡೆಸಲಾಗುವ ಜಿಲ್ಲಾ ಬ್ಯಾರಿ ಸಾಹಿತ್ಯ ಸಮ್ಮೇಳನದ ಭಾಗವಾಗಿ ಮಡಿಕೇರಿಯ ಕಮ್ಯುನಿಟಿ ಸಭಾಂಗಣದಲ್ಲಿ ನಡೆದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಾಮಾಜಿಕ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಮಹಿಳೆಯರು , ಮಕ್ಕಳು, ಹಾಗೂ ಯುವಕರಿಗೆ ವಿವಿಧ ಸ್ಪರ್ದೆಗಳು ,ಸಮ್ಮೇಳನದಂದು ಕವಿಗೋಷ್ಟಿ ,ವಿಚಾರ ಸಂಕೀರಣ , ವಿಚಾರ ಗೋಷ್ಟಿ ಕಾರ್ಯಕ್ರಮಗಳು ,ನಡೆಯಲಿರುವ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು.

ಮುಖ್ಯ ಅಥಿತಿಯಾಗಿ ಉಪಸ್ಥಿತರಿದ್ದ ನಗರ ಸಭಾ ಸದಸ್ಯ ಹಾಗೂ ಬದ್ರಿಯಾ ಮಸೀದಿಯ ಅಧ್ಯಕ್ಷರಾದ ಅಮೀನ್ ಮುಹ್ಸಿನ್ ಮಾತಾನಾಡಿ ಬ್ಯಾರಿ ಸಮುದಾಯವು ರಾಜಕೀಯ ,ಸಾಮಾಜಿಕ ಶೈಕ್ಷಣಿಕವಾಗಿ ಮುಂದೆ ಬರಬೇಕು ಸಮುದಾಯದಲ್ಲಿ ಪ್ರತಿಭಾವಂತ ನಾಯಕರುಗಳಿದ್ದರೂ.ಸರ್ಕಾರದ ನಿಗಮ ಮಂಡಲಗಳಲ್ಲಿ ಸ್ಥಾನ ಗಳಿಸಲು ಸಾದ್ಯವಾಗದಿರುವುದು ಬಹು ದೊಡ್ಡ ದುರಂತ ಆದ್ದರಿಂದ ಬ್ಯಾರಿ ಸಮುದಾಯ ಒಗ್ಗಟ್ಟನ್ನು ಪ್ರದರ್ಶಿಸಿಸುವುದರೊಂದಿಗೆ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಜಿಲ್ಲೆಯಲ್ಲಿ ನಡೆಯಲಿರುವ ಬ್ಯಾರಿ ಸಮ್ಮೇಳನವನ್ನು ಯಶಸ್ಸುಗೊಳಿಸಬೇಕು ಎಂದರು.

ನಗರ ಸಭಾ ಸದಸ್ಯರಾದ ಬಶೀರ್ ಅಹಮದ್ ,ಮನ್ಸೂರ್ ಅಹಮದ್ ಸಂದರ್ಭೋಚಿತವಾಗಿ ಮಾತನಾಡಿ ಸಮ್ಮೇಳನದ ಯಶಸ್ವಿಗೆ ಕೈ ಜೋಡಿಸಲು ಮನವಿ ಮಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕೊಡಗು ಬ್ಯಾರೀಸ್ ವೆಲ್ಪೇರ್ ಟ್ರಸ್ಟ್ ಅಧ್ಯಕ್ಷ ಎಂ ಬಿ ನಾಸಿರ್ ಅಹಮದ್ ಮಾತನಾಡಿ ಬ್ಯಾರಿ ಸಮುದಾಯವು ಮಂಗಳೂರು, ಚಿಕ್ಜಮಗಳೂರು, ಬೆಂಗಳೂರು ಸೇರಿದಂತೆ ಅಂತರಾಷ್ಟ್ರಿಯ ಮಟ್ಟದಲ್ಲಿ ಸಂಘಟಿತವಾಗಿ ಕಾರ್ಯನಿರ್ವಹಿಸುತ್ತಿದೆ. ಅದೇ ರೀತಿ ನಮ್ಮ. ಕೊಡಗಿನ ಮೂಲೆ ಮೂಲೆಗಳಲ್ಲಿ ಬ್ಯಾರಿ ಸಮುದಾಯ ಜೀವನ ಸಾಗಿಸುತ್ತಿದೆ ,ಕೂಲಿ ಕಾರ್ಮಿಕರಿಂದ ಹಿಡಿದು ಉನ್ನತ ಅಧಿಕಾರಿಗಳಾಗಿ ಕೆಲಸ ಮಾಡುವವರು ಇದ್ದಾರೆ ಆದರೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದೆ ಇರುವ ಬ್ಯಾರಿ ಸಮುದಾಯವನ್ನು ಮುನ್ನಲೆಗೆ ತರುವ ಕಾರ್ಯ ಆಗಬೇಕಿದೆ.

 ಮುಖ್ಯವಾಗಿ ಕೊಡಗು ಜಿಲ್ಲೆಯಲ್ಲಿ .ಬ್ಯಾರಿ ಸಮುದಾಯ ಭವನಕ್ಕಾಗಿ ಸರಕಾರದ ಗಮನ ಸೆಳೆಯಬೇಕಾಗಿದೆ ಇದಕ್ಕಾಗಿ ಏಪ್ರಿಲ್ 28ರಂದು ಮಡಿಕೇರಿಯಲ್ಲಿ ನಡೆಯಲಿರುವ ಕೊಡಗು ಜಿಲ್ಲಾ ಬ್ಯಾರಿ ಸಾಹಿತ್ಯ ಸಮ್ನೇಳನಕ್ಕೆ ಸರ್ವರೂ ಸಹಕರಿಸಬೇಕು ಎಂದು ಮನವಿ ಮಾಡಿದರು

. ನಿಕಟ ಪೂರ್ವ ಸದಸ್ಯ ಎಸ್ ಐ ಮುನೀರ್ ಸ್ವಾಗತಿಸಿ ನಿರೂಪಿಸಿದರು ಉಪಾದ್ಯಕ್ಷ ಎಂ ಎ ನಾಸಿರ್ ವಂದಿಸಿದರು ಸಭೆಯಲ್ಲಿ ನಗರ ಸಭಾ ಸದಸ್ಯ. ಎಂ ಎ ಮುಸ್ತಫ ,ನಾಮ ನಿರ್ಧೇಶಿತ ನಗರ ಸಭಾ ಸದಸ್ಯ ಯಾಕೂಬು ,ಬ್ಯಾರಿ ಅಕಾಡಮಿ ಮಾಜಿ ಹಿರಿಯ ಸದಸ್ಯ ಪತ್ರಕರ್ತ ಅಬ್ದುಲ್ಲಾ ಶರೀಪ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಉಪ ಸಮಿತಿಗಳ ರಚನೆ; ಸ್ವಾಗತ ಸಮಿತಿ, ಪ್ರಚಾರ ಸಮಿತಿ,ಕ್ರೀಡಾ ಸಮಿತಿ,ಹಣಕಾಸು ಸಮಿತಿ ಆಹಾರ ಸಮಿತಿ ವೇದಿಕೆ ಸಮಿತಿ ಸಾಂಸ್ರ್ಕತಿಕ ಸಮಿತಿ ಹಾಗೂ ಸ್ವಯಂ ಸೇವಾ ಸಮಿತಿಗಳನ್ನು ರಚಿಸಲಾಯಿತು. ‌