ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್‍ಶಿಪ್-2026: ಪೆರುಂಬಾಡಿಯ ಜೆನ್ ಸಿಟೋರಿಯೋ ಸ್ಕೂಲ್ ಆಫ್ ಇಂಡಿಯಾ ಕರಾಟೆ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ

ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್‍ಶಿಪ್-2026: ಪೆರುಂಬಾಡಿಯ ಜೆನ್ ಸಿಟೋರಿಯೋ ಸ್ಕೂಲ್ ಆಫ್ ಇಂಡಿಯಾ ಕರಾಟೆ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ

ವಿರಾಜಪೇಟೆ: ಮೈಸೂರಿನ ಟೆರೆಷಿಯನ್ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್‍ಶಿಪ್-2026 ರಲ್ಲಿ ವಿರಾಜಪೇಟೆಯ ಆರ್ಜಿ ಗ್ರಾಮದ ಪೆರುಂಬಾಡಿಯ ಜೆನ್ ಸಿಟೋರಿಯೋ ಸ್ಕೂಲ್ ಆಫ್ ಇಂಡಿಯಾ ಕರಾಟೆ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದಾರೆ.

   ಪ್ರಜ್ಞಾ ಎನ್.ಬಿ. ಕತಾ ಹಾಗೂ ಕುಮಿತೆಯಲ್ಲಿ ಮೂರನೇ ಸ್ಥಾನ, ನಿರಂಜನ, ಗಾನವಿ ಎನ್.ಎಲ್. ಕುಮಿತೆಯಲ್ಲಿ ಮೂರನೇ ಸ್ಥಾನ, ಹಿಮಾನಿ ಕೆ.ವಿ.ಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

  ಹಾದಿಯ ಪಿ.ಎಸ್. ಹಾಗೂ ಡೆನಿಶ್ ಪಿ.ಎಲ್ ಇವರು ಕತಾ ಹಾಗೂ ಕುಮಿತೆಯಲ್ಲಿ ತೃತೀಯ ಸ್ಥಾನ, ಅನುರಾಗ್ ಟಿ.ಎಸ್. ಕತಾ ಹಾಗೂ ಕುಮಿತೆಯಲ್ಲಿ ಪ್ರಥಮ, ಅಭಿನವ್ ಟಿ.ಎಸ್. ಕುಮಿತೆಯಲ್ಲಿ ದ್ವಿತೀಯ ಸ್ಥಾನ ನಿರಂಜನ ಎಂ.ಎಂ. ಕತಾ ಹಾಗೂ ಕುಮಿತೆಯಲ್ಲಿ ತೃತೀಯ ಸ್ಥಾನ, ಗಗನ್ ಎಸ್. ಕತಾ ವಿಭಾಗದಲ್ಲಿ ತೃತೀಯ ಸ್ಥಾನ, ಕೃತಿಕ್ ಎಂ. ಕತಾ ವಿಭಾಗದಲ್ಲಿ ಪ್ರಥಮ, ಕುಮಿತೆಯಲ್ಲಿ ತೃತೀಯ ಸ್ಥಾನ, ದ್ಯಾನ್ ಟಿ.ಎಚ್. ಕತಾ ಮತ್ತು ಕುಮಿತೆಯಲ್ಲಿ ತೃತೀಯ, ಜೋಹನ್, ಆದರ್ಶ್ ಕೆ.ಬಿ. ಕತಾ ವಿಭಾಗದಲ್ಲಿ ತೃತೀಯ, ಗಿಲನ್ ಬಿ.ಬಿ.ಕತಾ ವಿಭಾಗದಲ್ಲಿ ದ್ವಿತೀಯ, ಕುಮಿತೆಯಲ್ಲಿ ತೃತೀಯ ಸ್ಥಾನ, ಆದಂ ಮತ್ತು ಕಾರ್ತಿಕ್ ಕತಾ ವಿಭಾಗದಲ್ಲಿ ತೃತೀಯ ಸ್ಥಾನ, ದ್ರುತಿಕ್ ಡಿ. ಕತಾ ಮತ್ತು ಕುಮಿತೆಯಲ್ಲಿ ತೃತೀಯ ಸ್ಥಾನ, ಲಕ್ಷಿತ್ ಶೆಟ್ಟಿ ಬಿ.ಎನ್. ಕುಮಿತೆಯಲ್ಲಿ ದ್ವಿತೀಯ, ಕತಾ ವಿಭಾಗದಲ್ಲಿ ತೃತೀಯ, ಬಿಂದ್ಯಾ ಪಿ.ಬಿ. ಕತಾ ಮತ್ತು ಕುಮಿತೆಯಲ್ಲಿ ಪ್ರಥಮ ಸ್ಥಾನ, ಸಮಿತ್ ಪಿ.ಬಿ. ಕುಮಿತೆಯಲ್ಲಿ ತೃತೀಯ, ಕೃಶಾಂಕ್ ಎಂ.ಎಸ್. ಕುಮಿತೆಯಲ್ಲಿ ಪ್ರಥಮ, ಕತಾ ವಿಭಾಗದಲ್ಲಿ ದ್ವಿತೀಯ, ಹರಿಧ ಕುಮಿತೆಯಲ್ಲಿ ತೃತೀಯ, ಕತಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೋಂಡಿದ್ದಾರೆ.

     ಇವರಿಗೆ ಸೆನ್ಸಾಯಿ ಶಿವಪ್ಪ ಅವರು ತರಬೇತಿ ನೀಡಿದ್ದಾರೆ.ಈ ಸಂದರ್ಭ ಅನಿಲ್ ಕುಮಾರ್ ಹಾಗೂ ಭರತ್ ಬಿ.ಪಿ. ಉಪಸ್ಥಿತರಿದ್ದರು.