ಕೊಡಗು ಹಿಂದೂ ಮಲಯಾಳಿ‌ ಸಮಾಜದ ಅಧ್ಯಕ್ಷರಾಗಿ ಪ್ರಶಾಂತ್, ಪ್ರಧಾನ ಕಾರ್ಯದರ್ಶಿಯಾಗಿ ಅರುಣ್‌ಕುಮಾರ್ ಆಯ್ಕೆ

ಕೊಡಗು ಹಿಂದೂ ಮಲಯಾಳಿ‌ ಸಮಾಜದ ಅಧ್ಯಕ್ಷರಾಗಿ ಪ್ರಶಾಂತ್, ಪ್ರಧಾನ ಕಾರ್ಯದರ್ಶಿಯಾಗಿ  ಅರುಣ್‌ಕುಮಾರ್ ಆಯ್ಕೆ
ಅಧ್ಯಕ್ಷ & ಪ್ರಧಾನ ಕಾರ್ಯದರ್ಶಿ

ಗೋಣಿಕೊಪ್ಪ ; ಕೊಡಗು ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷರಾಗಿ ಕೆ. ಪಿ. ಪ್ರಶಾಂತ್, ಪ್ರಧಾನ ಕಾರ್ಯದರ್ಶಿಯಾಗಿ ವಿ. ವಿ. ಅರುಣ್‌ಕುಮಾರ್ ಅವಿರೋಧವಾಗಿ ಆಯ್ಕೆಯಾದರು. ಗೌರವ ಅಧ್ಯಕ್ಷರಾಗಿ ಪಿ. ಎಸ್. ಶರತ್ ಕಾಂತ್, ಉಪಾಧ್ಯಕ್ಷರಾಗಿ ಕೆ. ಜಿ. ಪ್ರಸಾದ್, ಸಿ. ಕೆ. ವೇಣುಗೋಪಾಲ್, ಎಂ. ಡಿ. ಶೀಜಾ ಪ್ರದೀಪ್, ಪುಷ್ಪ ಮನೋಜ್, ಖಜಾಂಚಿಯಾಗಿ ಶಾಜಿ ಅಚ್ಚುತ್ತನ್, ಸಂಘಟನಾ ಕಾರ್ಯದರ್ಶಿಯಾಗಿ ಟಿ. ಜಿ. ಮನುಕುಮಾರ್, ಸರಳ ಮಣಿಲಾಲ್, ಸಹ ಕಾರ್ಯದರ್ಶಿಯಾಗಿ ಪಿ. ಜಿ. ಬಿಂದು ಶಾಜಿ, ನಿರ್ದೇಶಕರಾಗಿ ವಿ. ಎನ್. ರೀನಾ, ಪಿ. ಕೆ. ಸುನಿತಾ, ಪಿ. ವಿ. ಚಂದ್ರನ್, ಪಿ. ಜಿ . ರಾಜಶೇಖರ್, ಕೆ. ಎಂ. ರತೀಶ್ ಕುಮಾರ್ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಗೋಣಿಕೊಪ್ಪ ಗ್ರಾಮಾಂತರ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ. ಕೆ. ಪ್ರತಾಪ್ ಹಾಗೂ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಇ. ಕಿರಣ್ ಕಾರ್ಯನಿರ್ವಹಿಸಿದರು.